ಕೆದಂಬಾಡಿ: ʻನನ್ನ ಬೂತ್ ನಾನು ಅಭ್ಯರ್ಥಿʼ ಕಾಂಗ್ರೆಸ್ ಚುನಾವಣೆ ಪ್ರಚಾರ

0


ಎಲ್ಲಾ ಬೂತ್‌ಗಳಲ್ಲಿ ಕಾಂಗ್ರೆಸ್ ಪರ ಒಲವು ಇದೆ: ಪುರಂದರ ರೈ ಕೋರಿಕ್ಕಾರು

ಪುತ್ತೂರು: ನನ್ನ ಬೂತ್ ನಾನು ಅಭ್ಯರ್ಥಿ ಕೆದಂಬಾಡಿ ಕಾಂಗ್ರೆಸ್ ಚುನಾವಣೆ ಮತ ಬೇಟೆ ಕೆದಂಬಾಡಿ ಗ್ರಾಮದ 186 ಎರಡನೇ ಬೂತ್‌ನಲ್ಲಿ ಏ.24ರಂದು ನಡೆಯಿತು.

ಕಾಂಗ್ರೆಸ್ ಕೆದಂಬಾಡಿ ವಲಯ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರ್, ಬೂತ್ ಅಧ್ಯಕ್ಷ ಅಬ್ದುಲ್ಲಾ ಹಾಜಿ, ಪುತ್ತೂರು ಬ್ಲಾಕ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಇಸ್ಮಾಯಿಲ್ ಗಟ್ಟಮನೆ, ವಲಯ ಕಾರ್ಯದರ್ಶಿ ಅಶ್ರಫ್ ಸಾರಪುಣ, ಕೆದಂಬಾಡಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅಸ್ಮಾ ಗಟ್ಟಮನೆ, ಕೆ.ಸುಜಾತ, ಯಂಗ್ ಬ್ರಿಗೇಡ್ ಹೈದರ್ ಗಟ್ಟಮನೆ, ಸಾಮಾಜಿಕ ಜಾಲತಾಣದ ಮುಸ್ತಫಾ ಗಟ್ಟಮನೆ, ಸಮದ್ ಗಟ್ಟಮನೆ, ಇಸುಬು ಇದ್ಪಾಡಿ, ಅಬೂಬಕ್ಕರ್, ಚೋಮ, ಜಾನಕಿ, ಕಮಲ, ಬೊಮ್ಮಿ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ವಲಯ ಅಧ್ಯಕ್ಷ ಪುರಂದರ ರೈ ಕೋರಿಕ್ಕಾರ್‌ರವರು, ಕೆದಂಬಾಡಿ ಗ್ರಾಮದ ಎಲ್ಲಾ ಬೂತ್‌ಗಳಲ್ಲೂ ಕಾಂಗ್ರೆಸ್ ಪರ ಒಲವು ಮತದಾರರಲ್ಲಿರುವುದು ಕಂಡು ಬಂದಿದೆ. ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿಯವರು ಈ ಸಲ ವಿಜಯಿಯಾಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here