ಕೆಮ್ಮಿಂಜೆ ಶ್ರೀರಾಮ ಮಂದಿರದಲ್ಲಿ ಧೀಶಕ್ತಿ ಬಳಗದಿಂದ ತಾಳಮದ್ದಳೆ

0


ಪುತ್ತೂರು: ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದ ಪುನರ್ ಪ್ರತಿಷ್ಠಾಪನೆಯ ಅಂಗವಾಗಿ ಪುತ್ತೂರು ಧೀಶಕ್ತಿ ಮಹಿಳಾ ಯಕ್ಷಬಳಗದಿಂದ ಕುಂಬಳೆ ಪಾರ್ತಿಸುಬ್ಬ ವಿರಚಿತ “ವಾಲಿವಧೆ” ತಾಳಮದ್ದಳೆ ನಡೆಯಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಕು| ರಚನಾ ಚಿದ್ಗಲ್, ಮದ್ದಳೆಯಲ್ಲಿ ಲಕ್ಷ್ಮೀಶ ಪಂಜ, ಚೆಂಡೆಯಲ್ಲಿ ಮಾ| ಅದ್ವೈತ ಕನ್ಯಾನ, ಚಕ್ರತಾಳದಲ್ಲಿ ಕು| ಚೈತಾಲಿ ಕಾಂಚೋಡು ಸಹಕರಿಸಿದರು. ಮುಮ್ಮೇಳದಲ್ಲಿ ಪದ್ಮಾ ಕೆ ಆರ್ ಆಚಾರ್ಯ(ಶ್ರೀರಾಮ), ಜಯಲಕ್ಷ್ಮಿ ವಿ ಭಟ್(ವಾಲಿ), ಶ್ರೀವಿದ್ಯಾ ಜೆ ರಾವ್(ತಾರಾ), ಶುಭಾ ಪಿ ಆಚಾರ್ಯ( ಸುಗ್ರೀವ), ಅರ್ಥದಾರಿಗಳಾಗಿ ಪಾತ್ರ ನಿರ್ವಹಣೆ ಮಾಡಿದರು. ಮಂದಿರದ ವತಿಯಿಂದ, ಕಲಾವಿದರನ್ನು ಗೌರವಿಸಿದರು.

LEAVE A REPLY

Please enter your comment!
Please enter your name here