ಕುಶಾಲನಗರದಲ್ಲಿ ಪುತ್ತೂರು ಆಂಜನೇಯ ಮಹಿಳಾ ಸಂಘದಿಂದ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಕುಶಾಲನಗರದ ದ್ರಾವಿಡ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ “ಶ್ರೀ ರಾಮ ನವಮಿ” ಕಾರ್ಯಕ್ರಮದ ಅಂಗವಾಗಿ ಪುತ್ತೂರು ಬೊಳುವಾರು ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಸದಸ್ಯರಿಂದ ಪಾರ್ತಿಸುಬ್ಬ ವಿರಚಿತ “ಪಾದುಕಾ ಪ್ರದಾನ” ಯಕ್ಷಗಾನ ತಾಳಮದ್ದಳೆ ಎ.23ರಂದು ನಡೆಯಿತು.

ಹಿಮ್ಮೇಳದಲ್ಲಿ ಸುಬ್ರಾಯ ಸಂಪಾಜೆ, ಲಕ್ಷ್ಮೀಶ ಬೇಂಗ್ರೋಡಿ, ಮುರಳೀಧರ ಕಲ್ಲೂರಾಯ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ ಸಿ ಅಡಿಗ(ಭರತ), ಕಿಶೋರಿ ದುಗ್ಗಪ್ಪ ನಡುಗಲ್ಲು(ಶ್ರೀ ರಾಮ), ಹರಿಣಾಕ್ಷಿ ಜೆ ಶೆಟ್ಟಿ(ವಸಿಷ್ಠ ಮತ್ತು ಲಕ್ಷ್ಮಣ) ಸಹಕರಿಸಿದರು. ನಿರ್ದೇಶಕ ಭಾಸ್ಕರ್ ಬಾರ್ಯ ಸ್ವಾಗತಿಸಿ, ರಾಜಶೇಖರ್ ವಂದಿಸಿದರು. ಮಡಿಕೇರಿ ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಸಂಯೋಜಿಸಿದ್ದರು.

LEAVE A REPLY

Please enter your comment!
Please enter your name here