ಏ.30(ನಾಳೆ): ಕೊಳ್ತಿಗೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಂಸಾವತಿ ಕೆ. ಕರ್ತವ್ಯದಿಂದ ನಿವೃತ್ತಿ

0

ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಂಸಾವತಿ ಕೆ.ರವರು ಏ.30ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ. ಕೊಳ್ತಿಗೆ ಗ್ರಾಮದ ಕೊಂರ್ಬಡ್ಕಬೀಡು ನಾಗಪ್ಪ ರೈ ಮತ್ತು ರೇವತಿಯವರ ಪುತ್ರಿಯಾಗಿರುವ ಹಂಸಾವತಿ ಕೆ.ರವರು ಜ.1, 1986ರಲ್ಲಿ ಗುಮಾಸ್ತೆಯಾಗಿ ಕರ್ತವ್ಯಕ್ಕೆ ಹಾಜರಾದ ಇವರು ಪಾಲ್ತಾಡಿ ಶಾಖಾಗೆ ಶಾಖಾ ವ್ಯವಸ್ಥಾಪಕರಾಗಿ, ಸಹ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ಸಲ್ಲಿಸಿ ಬಳಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಹೀಗೆ ವಿವಿಧ ಹುದ್ದೆಗಳಲ್ಲಿ 39 ವರ್ಷಗಳ ಕಾಲ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದುತ್ತಿದ್ದಾರೆ.
ಪತಿ ಹರೀಶ ರೈ ಮರುವಂಜ ಮೊಯಿಲಿಮೂಲೆ, ಪುತ್ರಿ ಶರಣ್ಯ ಎಂ. ಮತ್ತು ಅಳಿಯ ಮಹೇಶ್ ರೈ ಕುಂಟೋಡಿ,ಮೊಮ್ಮಗಳು ದೀಶ್ನಾ ರೈಯವರೊಂದಿಗೆ ಮರುವಂಜ ಮೊಯಿಲಿಮೂಲೆಯಲ್ಲಿ ವಾಸವಾಗಿದ್ದಾರೆ.

LEAVE A REPLY

Please enter your comment!
Please enter your name here