ಕೊಡಿಪ್ಪಾಡಿ:ಮನೆಯಲ್ಲಿ ಒಬ್ಬಂಟಿಯಾಗಿದ್ದ ಯುವಕ ನೇಣುಬಿಗಿದು ಆತ್ಮಹತ್ಯೆ

0

ಪುತ್ತೂರು:ಯುವಕನೋರ್ವ ಮನೆಯಲ್ಲಿ ಒಬ್ಬಂಟಿಯಾಗಿದ್ದ ವೇಳೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಿಪ್ಪಾಡಿಯಿಂದ ವರದಿಯಾಗಿದೆ.
ಕೊಡಿಪ್ಪಾಡಿ ಪಲ್ಲತ್ತಾರು ದಿ.ಚಂದ್ರಶೇಖರ್ ಆಚಾರ್ಯ ಅವರ ಮಗ ಪುಷ್ಪರಾಜ ಮೃತಪಟ್ಟವರು.ಈ ಕುರಿತು ಮೃತರ ತಾಯಿ ಸರಸ್ವತಿ ಅವರು ಪುತ್ತೂರು ನಗರ ಪೊಲೀಸರಿಗೆ ದೂರು ನೀಡಿದ್ದಾರೆ.


ಮಗ ಪುಷ್ಪರಾಜ ಕಬಕ ಗ್ರಾಮದ ಪೋಳ್ಯದಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ.ಏ.27ರಂದು ನಾನು ಮಗಳು ಶೋಭಾಳ ಮನೆಗೆ ತೆರಳಿದ್ದೆ.ಆ ಸಮಯ ಪುಷ್ಪರಾಜ ಮನೆಯಲ್ಲಿ ಒಬ್ಬನೇ ಇದ್ದು, ಏ.29ರಂದು ಮಧ್ಯಾಹ್ನ ನನಗೆ ದೂರವಾಣಿ ಕರೆ ಮಾಡಿ,ನಾನು ಮುಂಬೈಗೆ ಹೋಗುತ್ತೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ.ಮೇ 1ರಂದು ಮಧ್ಯಾಹ್ನ ನಾನು ಮನೆಗೆ ವಾಪಸ್ಸು ಬಂದು ನೋಡಿದಾಗ ಮಗ ಪುಷ್ಪರಾಜ ಮನೆಯ ದೇವರ ಕೋಣೆಯಲ್ಲಿ ಮಾಡಿನ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂದು ಸರಸ್ವತಿಯವರು ನೀಡಿರುವ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here