ಹಿಂದೂ ರುದ್ರಭೂಮಿಗೆ ರೋಟರಿ ಪುತ್ತೂರುನಿಂದ ವಾಟರ್ ಕೂಲರ್ ಹಸ್ತಾಂತರ

0

ಪುತ್ತೂರು: ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ವತಿಯಿಂದ ಮಡಿವಾಳಕಟ್ಟೆಯಲ್ಲಿರುವ  ಹಿಂದೂ ರುದ್ರಭೂಮಿಗೆ ವಾಟರ್ ಕೂಲರ್ ಹಸ್ತಾಂತರಿಸುವ ಕಾರ್ಯಕ್ರಮ ಮೇ ,3 ರಂದು ಸಂಜೆ ಜರಗಿತು.

ಅಂತರರಾಷ್ಟ್ರೀಯ ರೋಟರಿಯ ಮಹಾದಾನಿ ಎನಿಸಿಕೊಂಡು ಬೀಕ್ವೆಸ್ಟ್ ಸೊಸೈಟಿ ಮೆಂಬರ್ ಎಂದು ಗುರುತಿಸಿಕೊಂಡಿರುವ ರಾಮಕೃಷ್ಣ ಕೆ.ರವರು ವಾಟರ್ ಕೂಲರ್ ಅನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. 

ವಾಟರ್ ಕೂಲರ್ ನ ಪ್ರಾಯೋಜಕತ್ವ ವಹಿಸಿಕೊಂಡಿರುವ ಡಾ.ಹರೀಶ್ ಪಿ.ಶೆಣೈರವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕ್ಲಬ್ ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ಸುಜಿತ್ ಡಿ.ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಸೋಮಶೇಖರ್ ರೈ, ಸದಸ್ಯರಾದ ಪರಮೇಶ್ವರ್ ಗೌಡ, ಡಾ.ಶ್ರೀಪ್ರಕಾಶ್ ಬಿ, ಶ್ರೀಕಾಂತ್ ಕೊಳತ್ತಾಯ, ದಾಮೋದರ್, ಮಧು ನರಿಯೂರು, ಅಶೋಕ್ ಬಲ್ನಾಡು, ರುದ್ರಭೂಮಿಯ ನಿರ್ವಾಹಕ ಸತೀಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here