ನಂದಿನಿ ನಗರ ನಿವಾಸಿ ಕುಮಾರಿ ಹೃದಯಾಘಾತದಿಂದ ನಿಧನ

0

ಉಪ್ಪಿನಂಗಡಿ: ಇಲ್ಲಿನ ನಂದಿನಿ ನಗರ ನಿವಾಸಿ ಉಪ್ಪಿನಂಗಡಿ ಪೊಲೀಸ್ ಠಾಣಾ ಸ್ವಚ್ಚತಾ ಸಿಬ್ಬಂದಿ ಶ್ರೀಮತಿ ಕುಮಾರಿ (65) ಹೃದಯಾಘಾತದಿಂದ ಶುಕ್ರವಾರ ನಸುಕಿನ ವೇಳೆ ನಿಧನರಾದರು.


ಉಪ್ಪಿನಂಗಡಿಯ ಪೊಲೀಸ್ ಠಾಣೆಯಲ್ಲಿ ಸ್ವಚ್ಚತಾ ಕಾರ್ಯ ನಡೆಸುತ್ತಾ ಊರಿನ ಹಲವು ಮನೆಗಳಲ್ಲಿ ಸಹಾಯಕಿಯಾಗಿಯೂ ಕರ್ತವ್ಯ ನಿರ್ವಹಿಸುತ್ತಾ ಜನಾನುರಾಗಿಯಾಗಿದ್ದ ಕುಮಾರಿಯವರು ಗುರುವಾರದವರೆಗೆ ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದು, ಮನೆಯಲ್ಲಿ ಮಲಗಿದ್ದವರು ಶುಕ್ರವಾರ ಮುಂಜಾನೆ ಹೃದಯಾಘಾತಕ್ಕೀಡಾಗಿ ಮಲಗಿದ್ದಲ್ಲೇ ಮೃತಪಟ್ಟಿದ್ದರು. ಮೃತರು ಇಬ್ಬರು ಪುತ್ರರು, ಒರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here