ಹದಗೆಟ್ಟ ಉಪ್ಪಳಿಗೆ ದರ್ಬೆತ್ತಡ್ಕ ಶೇಖಮಲೆಯ ಡಾಮರ್ ರಸ್ತೆ- ದುರಸ್ತಿಗೆ ಸಾರ್ವಜನಿಕರ ಒತ್ತಾಯ

0

ನಿಡ್ಪಳ್ಳಿ: ಉಪ್ಪಳಿಗೆಯಿಂದ ಅಜಲಡ್ಕ ದರ್ಬೆತ್ತಡ್ಕ‌ ಮಾರ್ಗವಾಗಿ ಶೇಖಮಲೆ ಸೇರುವ ಜಿಲ್ಲಾ ಪಂಚಾಯತ್ ರಸ್ತೆ ತೀರಾ ಹದಗೆಟ್ಟಿದ್ದು ದುರಸ್ತಿಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

 ಪೂರ್ತಿ ಕಿತ್ತುಹೋದ ಡಾಮರ್
ಉಪ್ಪಳಿಗೆಯಿಂದ ಅಜಲಡ್ಕದವರೆಗೆ ರಸ್ತೆ ತಕ್ಕಮಟ್ಟಿಗೆ ಚೆನ್ನಾಗಿದ್ದು, ಅಜಲಡ್ಕ ತಿರುಗುವಲ್ಲಿ ಡಾಮರ್ ಪೂರ್ತಿ ಕಿತ್ತು ಹೋಗಿದೆ.ಅಜಲಡ್ಕ ತಿರುಗುವಲ್ಲಿ ರಸ್ತೆ ಸ್ವಲ್ಪ ಎತ್ತರವಾಗಿದ್ದು ಅಲ್ಲಿ ಸಂಪೂರ್ಣ ರಸ್ತೆ ಹದಗೆಟ್ಟಿದೆ. ಅಲ್ಲಿಂದ ಮುಂದೆ ಶೇಖಮಲೆಯವರೆಗೂ ರಸ್ತೆ ಅಲ್ಲಲ್ಲಿ ಹಾಳಾಗಿದೆ.

 ಕೆ.ಎಸ್.ಅರ್.ಟಿ.ಸಿ ಬಸ್ಸು ಸಂಚರಿಸಲು ಸಮಸ್ಯೆ ;
ಉಪ್ಪಳಿಗೆಯಿಂದ ಅಜಲಡ್ಕ ದರ್ಬೆತ್ತಡ್ಕ ಶಂಖಮಲೆಗೆ ಪ್ರತಿದಿನ ಕೆ.ಎಸ್.ಅರ್.ಟಿ.ಸಿ ಬಸ್ಸು ಸಂಚಾರ ಇದೆ. ರಸ್ತೆಯ ಅವ್ಯವಸ್ಥೆಯಿಂದ ಅದರ ಸಂಚಾರಕ್ಕೂ ಬಹಳ ಸಮಸ್ಯೆಯಾಗುತ್ತಿದ್ದು ,ಪ್ರಯಾಣಿಕರು ಬಸ್ಸಲ್ಲಿ ಹೋಗಲು ಹಿಂದೇಟು ಹಾಕುತ್ತಿದ್ದಾರೆ.ಆದುದರಿಂದ ಸಂಬಂಧಿಸಿದ ಇಲಾಖೆ ಇದರ ಬಗ್ಗೆ  ತಕ್ಷಣ ಸ್ಪಂದಿಸಿ ದುರಸ್ತಿಗೊಳಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here