ಮೇ.9: ತಾ|ಸರಕಾರಿ ನೌಕರರ ಸಂಘದಿಂದ ಪುರಭವನದಲ್ಲಿ ತುಳು ನಾಟಕ “ಮೈತಿದಿ”

0

ಪುತ್ತೂರು: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ಪುತ್ತೂರು ತಾಲೂಕು ಶಾಖೆಯ ವತಿಯಿಂದ ತುಳು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದ ವಿಜಯಕುಮಾರ್ ಕೊಡಿಯಾಲ್ ಬೈಲ್ ರಚಿಸಿ ನಿರ್ದೇಶಿಸಿದ ಹೊಸ ನಾಟಕ ” ಮೈತಿದಿ” ಮೇ.9ರಂದು ಸಂಜೆ ಪುರಭವನದಲ್ಲಿ ಜರಗಲಿದೆ.
ಈ ನಾಟಕದ ಪ್ರದರ್ಶನ ಏಪ್ರಿಲ್ 24 ರಂದು ಆಗಬೇಕಿತ್ತು. ಲೋಕಸಭಾ ಚುನಾವಣಾ ನಿಮಿತ್ತ ಮುಂದೂಡಲ್ಪಟ್ಟಿತ್ತು. ನಾನ್-ವೆಜ್ ಡಯಲಾಗ್ ಗಳನ್ನು ಹೊಂದದೆ ಸಂಪೂರ್ಣ ಸಸ್ಯಹಾರಿ ನಾಟಕ ಇದಾಗಿದ್ದು, ಮಹತ್ವದ ಸಂದೇಶ ಈ ನಾಟಕ ಹೊಂದಿದೆ. ಕಲಾ ಸಂಗಮದ ಶಿವದೂತ ಗುಳಿಗೆ ಕಲಾವಿದರಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನ, ಸ್ವರಾಜ್ ಶೆಟ್ಟಿ ಅಭಿನಯದ ತುಳು ವಿಭಿನ್ನ ಶೈಲಿಯ ಈ ನಾಟಕವನ್ನು ನಾಟಕಾಭಿಮಾನಿಗಳು ಪ್ರೋತ್ಸಾಹಿಸಬೇಕಾಗಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಆಚಾರ್ಯ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here