ಕೆಮ್ಮತ್ತಡ್ಕ: ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ವಿಷ್ಣು ಮೂರ್ತಿ ಹಾಗೂ ಪರಿವಾರ ದೈವಗಳ ಕೋಲ

0

ಈಶ್ವರಮಂಗಲ: ಮೇ.8 ಮತ್ತು 9ರಂದು ಕೆಮ್ಮತ್ತಡ್ಕದಲ್ಲಿನ ತರವಾಡು ಮನೆಯಲ್ಲಿ ಶ್ರೀ ಅಣ್ಣಪ್ಪ ಪಂಜುರ್ಲಿ, ಶ್ರೀ ವಿಷ್ಣು ಮೂರ್ತಿ ಹಾಗೂ ಪರಿವಾರ ದೈವಗಳ ಕೋಲವು ನಡೆಯಲಿದೆ.

ಮೇ.8ರಂದು ಬೆಳಿಗ್ಗೆ 10ರಿಂದ ಗಣಪತಿ ಹೋಮ, ನಾಗತಂಬಿಲ, ವಿಷ್ಣುಮೂರ್ತಿ ದೈವದ ತಂಬಿಲ ಸಂಜೆ ಗಂಟೆ 5 ಕ್ಕೆ ದೈವಗಳ ಭಂಡಾರ ತೆಗೆಯುವುದು, ದೈವನರ್ತಕರಿಗೆ ಎಣ್ಣೆ ಬೂಳ್ಯ ಕೊಡುವುದು, ಗುರುಕಾರ್ನವಾರು, ರಾಹುಗುಳಿಗ ಕೋಲ, ಮಂತ್ರವಾದಿಗುಳಿಗ, ಭೂಮಿಗುಳಿಗ ದೈವಗಳ ಪ್ರಸಾದ ಸ್ವೀಕಾರ ಹಾಗೂ ಅನ್ನ ಸಂತರ್ಪಣೆ ನಡೆದು, ಬಳಿಕ ರಾತ್ರಿ 9ರಿಂದ ಕಲ್ಲುರ್ಟಿ ಮತ್ತು ಕೊರತ್ತಿ ದೈವಗಳ ಕೋಲ, ಕೊರಗಜ್ಜ ದೈವಗಳ ಕೋಲ, ವರ್ಣಾರ ಪಂಜುರ್ಲಿ ಹಾಗೂ ಕುಪ್ಪೆ ಪಂಜುರ್ಲಿ ದೈವದ ಕೋಲ, ನಂತರ ಪೊಟ್ಟನ್‌ ದೈವದ ಅಗ್ನಿ ಪ್ರವೇಶ ಮತ್ತು ಕೋಲ ಪ್ರಸಾದ ಸ್ವೀಕಾರ ನಡೆಯಲಿದೆ.

ಮೇ.9ರಂದು ಬೆಳಿಗ್ಗೆ 8ರಿಂದ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ಹಾಗೂ ಬಯಲು ಕೋಲ, ಅಣ್ಣಪ್ಪ ಪಂಜುರ್ಲಿ ಕೋಲ, ಕರಿಚಾಮುಂಡಿ ಕೋಲ ನಡೆದು ಬಳಿಕ ಪ್ರಸಾದ ಸ್ವೀಕಾರ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here