ಉಪ್ಪಿನಂಗಡಿ ಜನಾರ್ಪಣ ಜನಸೇವಾ ಸಂಸ್ಥೆಯಿಂದ ಕಿಟ್ ವಿತರಣೆ

0

ಪುತ್ತೂರು: ಜನಾರ್ಪಣ ಜನಸೇವಾ ಸಂಸ್ಥೆ ಹಾಗೂ ಕರ್ನಾಟಕ ಮಾನವ ಹಕ್ಕುಗಳ ಜನಜಾಗೃತಿ ವೇದಿಕೆ, ಆರಕ್ಷಕ ಸುದ್ದಿ ಪತ್ರಿಕೆ ಇದರ ಜಂಟಿ ಆಶ್ರಯದಲ್ಲಿ ಅನಾರೋಗ್ಯವಂತರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆಯು ಇತ್ತೀಚೆಗೆ ಉಪ್ಪಿನಂಗಡಿ ರಾಮನಗರದ ಶಾರದಾ ಕಲಾ ಮಂದಿರದಲ್ಲಿ ನಡೆಯಿತು.


ಮಾನವ ಹಕ್ಕುಗಳ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷೆ ಪ್ರಮೀಳಾ ಭಾಸ್ಕರ್ ಬೆಂಗಳೂರು, ಜನಾರ್ಪಣ ಜನಸೇವಾ ಸಂಸ್ಥೆಯಮುಖ್ಯ ಸಲಹೆಗರಾರು, ತಾ.ಪಂ ಮಾಜಿ ಸದಸ್ಯ ಎನ್. ಉಮೇಶ್ ಶೆಣೈ ರಾಮನಗರ, ಸಂಸ್ಥೆಯ ಗೌರವಾಧ್ಯಕ್ಷರು, ಕಡಬ ತಾಲೂಕು ಉಪ ತಹಶೀಲ್ದಾರ್ ಕೆ ಗೋಪಾಲ್, ಮಾನವ ಹಕ್ಕುಗಳ ಜನಜಾಗೃತಿ ವೇದಿಕೆಯ ಎನ್.ಎಸ್ ಖಾದರ್ ಸಾಹೇಬ್ ನೆಲ್ಯಾಡಿ, ಮಾನವ ಹಕ್ಕು ವೇದಿಕೆಯ ಬೆಂಗಳೂರು ನಗರದ ಕಾರ್ಯದರ್ಶಿ ಸುನಿಲ್ ಎಮ್.ಜೆ., ಜನಾರ್ಪಣ ಜನಸೇವಾ ಸಂಸ್ಥೆಯ ಅಧ್ಯಕ್ಷ ಜಯರಾಜ್ ಅಮೀನ್ ದಾಸರಮೂಲೆ, ಕಾರ್ಯದರ್ಶಿ ದೀಪ್ತಿ ದಾಸರಮೂಲೆ ಹಾಗೂ ಸಂಸ್ಥೆಯ ಸದಸ್ಯರಾದ ರವಿ ರಾಮನಗರ, ಸುಚಿತ್ರ ಕೆಮ್ಮಾರ, ಸೌಮ್ಯ ರಾಮಕುಂಜ ಭಾಗವಹಿದ್ದರು.

LEAVE A REPLY

Please enter your comment!
Please enter your name here