ಎನ್‌ಡಿಎ ಪ್ರವೇಶ ಪರೀಕ್ಷೆ ಉತ್ತೀರ್ಣರಾದ ತೃಷಾ ರವರಿಗೆ ವಿದ್ಯಾಮಾತಾದಿಂದ ಸನ್ಮಾನ

0

ಪುತ್ತೂರು : ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರಿಯಡ್ಕ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಸವಿತಾ ಇವರ ಪುತ್ರಿ ತೃಷಾ ಅವರನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿಯಲ್ಲಿ ಸನ್ಮಾನಿಸಲಾಯಿತು.


ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕ ಭಾಗ್ಯೇಶ್ ರೈ ತೃಷಾರವರ ಸಾಧನೆಯನ್ನು ಕೊಂಡಾಡಿದರಲ್ಲದೇ , ಮುಂಬರುವ ಸಂದರ್ಶನಕ್ಕೆಲ್ಲಾ ಉಚಿತ ತರಬೇತಿಯನ್ನು ಅಕಾಡೆಮಿಯಿಂದ ನೀಡುವುದಾಗಿ ಘೋಷಣೆ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ತೃಷಾ ನಾನೂ ಪರೀಕ್ಷೆ ಎದುರಿಸೋ ಸಂದರ್ಭದಲ್ಲಿ ಸಂಪೂರ್ಣ ಮಾರ್ಗದರ್ಶನ ನೀಡಿದ ಭಾಗ್ಯೇಶ್ ರೈ ಯವರಿಗೆ ಕೃತಜ್ಞತೆ ಸಲ್ಲಿಸಿ , ವಂದಿಸಿದರು.
ಇದೇ ವೇಳೆ ತಾನು ವಿದ್ಯಾರ್ಜನೆ ಮಾಡುತ್ತಿರುವ ವಿವೇಕಾನಂದ ಕಾಲೇಜಿನ NCC ಘಟಕ ಇದರ ಬೆಂಬಲವನ್ನು ಕೂಡ ನೆನಪಿಸಿಕೊಂಡರು. ತೃಷಾ ತಾಯಿ ಸವಿತ , ವಿದ್ಯಾಮಾತಾ ಅಕಾಡೆಮಿಯ ಚಂದ್ರಕಾಂತ ಸಹಿತ ವಿದ್ಯಾರ್ಥಿಗಳು ಇದ್ದರು.

LEAVE A REPLY

Please enter your comment!
Please enter your name here