ಅರಿವು ಕೃಷಿ ಕೇಂದ್ರದಲ್ಲಿ ಉದ್ಯಮಾಸಕ್ತರಿಗೆ ಉದ್ಯಮಶೀಲತೆ, ಅಭಿವೃದ್ಧಿ ಕುರಿತ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಉದ್ಯೋಗಾಂಕ್ಷಿಗಳಿಗೆ ಮತ್ತು ಸ್ವಂತ ಉದ್ಯಮ ಮಾಡುವವರಿಗಾಗಿ ಉದ್ಯಮಶೀಲತೆ, ಅಭಿವೃದ್ಧಿ ಕುರಿತು ವಿಶೇಷ ಮಾಹಿತಿ ಕಾರ್ಯಾಗಾರ ಎಪಿಎಂಸಿ ರಸ್ತೆ ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನಲ್ಲಿರುವ ಅರಿವು ಕೃಷಿ ಕೇಂದ್ರದಲ್ಲಿ ನಡೆಯಿತು. ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಯೋಜನೆ ದ.ಕ.ಜಿಲ್ಲೆಯ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಮಾಹಿತಿ ನೀಡಿದರು. ಬೆಳಿಗ್ಗೆ 9.30ರಿಂದ ನೋಂದಾವಣೆ, ಬಳಿಕ ಕಾರ್ಯಾಗಾರ ನಡೆಯಿತು. ಅಪರಾಹ್ನ 2ರಿಂದ 4ರವರೆಗೆ ದಾಖಲಾತಿ ಜೋಡಣೆ ಮತ್ತು ಉದ್ಯಮ ಪ್ರಾರಂಭಿಸಲು ಬೇಕಾದ ಅಂತಿಮ ಯೋಜನೆ ತಯಾರಿ ಬಗ್ಗೆ ಪ್ರಾತ್ಯಕ್ಷಿಕತೆ ನಡೆಯಿತು. ದುರ್ಗಾ ಗಣೇಶ್ ಪುತ್ತೂರು, ಪುತ್ತುಭಾವ ಸವಣೂರು, ಅಶ್ವಥ್ ಕೆದಿಲ, ಲೋಕೇಶ್ ಕಾಣಿಯೂರು, ಮುಝಾಮಿಲ್ ಪುರುಷರಕಟ್ಟೆ, ನಿತೀಶ್ ಉಪ್ಪಿನಂಗಡಿ, ಶಿವಪ್ರಸಾದ್ ಕೆ.ಎ.ಪುತ್ತೂರು, ಎ.ಮಹಾಬಲ ರೈ ಪುತ್ತೂರು, ಸುಂದರ ಕಡಬ, ವೈಶಾಲಿ ಎಸ್., ಪ್ರತಿಮಾ ಪುತ್ತೂರು ಕಾಯಗಾರದಲ್ಲಿ ಭಾಗವಹಿಸಿದರು. ಅರಿವು ಕೃಷಿ ಕೇಂದ್ರದ ಚೈತ್ರಾ ಡಿ, ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here