ಬೆಂಗಳೂರಿನಲ್ಲಿ ’ಯುವ ಪ್ರತಿಭಾ’ ಕಾಂಚನೋತ್ಸವ-ಜಾಹ್ನವೀ ಶಿವಕುಮಾರ್ ಅವರಿಂದ ಕೊಳಲುವಾದನ

0

ಪುತ್ತೂರು: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ’ಯುವ ಪ್ರತಿಭಾ’ ಕಾಂಚನೋತ್ಸವ ಬೆಂಗಳೂರು ಗಿರಿನಗರದ ಅಕ್ಷರಂ ಸಭಾಂಗಣದಲ್ಲಿ ಜೂ.೧ರಂದು ಸಂಜೆ ನಡೆಯಿತು.
ಯುವ ಪ್ರತಿಭಾ ಕಾಂಚನೋತ್ಸವದಲ್ಲಿ ಅಮೆರಿಕದ ಡಲ್ಲಾಸ್‌ನಲ್ಲಿರುವ ಕುಮಾರಿ ಜಾಹ್ನವೀ ಶಿವಕುಮಾರ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಮೋಘ ಕೊಳಲುವಾದನ ಕಚೇರಿ ನಡೆಯಿತು. ಇವರಿಗೆ ಪಿಟೀಲಿನಲ್ಲಿ ವಿದುಷಿ ಅದಿತಿ ಕೃಷ್ಣಪ್ರಕಾಶ್, ಮೃದಂಗದಲ್ಲಿ ವಿದ್ವಾನ್ ಸುನಿಲ್ ಸುಬ್ರಹ್ಮಣ್ಯ ಹಾಗೂ ಘಟಂನಲ್ಲಿ ವಿದ್ವಾನ್ ಎನ್. ಫಣೀಂದ್ರರವರು ಸಹ ವಾದನವನ್ನು ನೀಡಿದರು. ಈ ಕಚೇರಿಗೂ ಮುನ್ನ ಬಾಲಪ್ರತಿಭೆಗಳಾದ ಅರ್ಪಿತಾ ಕುಳೂರ್, ಇಂಚರ, ಪೃಷ್ನಿ ಭಟ್, ಸೌಮ್ಯಶ್ರೀ, ಫಣಿ ವೇದಾಳ ಇವರಿಂದ ಪಿಟೀಲು ಚತುಷ್ಟಯ ಕಾರ್ಯಕ್ರಮವು ಪ್ರಭವ್ ಎನ್. ಅವರ ಮೃದಂಗ ಸಾಥ್‌ನೊಂದಿಗೆ ನಡೆಯಿತು. ಹಲವು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here