ಸಬಳೂರು: ವಿದ್ಯುತ್ ತಂತಿಗೆ ತಾಗುತ್ತಿದ್ದ ಮರದ ಗೆಲ್ಲುಗಳ ತೆರವು

0

ಕಡಬ: ಕೊೖಲ ಗ್ರಾಮದ ಸಬಳೂರು, ಸೀಗೆತ್ತಡಿ, ಪಾನ್ಯಾಲು, ತಿಮರೆಗುಡ್ಡೆ, ಓಕೆ, ಕಡೆಂಬ್ಯಾಲು, ಕೊಲ್ಯ ಭಾಗದಲ್ಲಿ ವಿದ್ಯುತ್ ತಂತಿಗಳಿಗೆ ಅಡಚಣೆಯಾಗುತ್ತಿದ್ದ ಮರದ ಗೆಲ್ಲುಗಳ ತೆರವು ಕಾರ್ಯವನ್ನು ಜೂ.2ರಂದು ವಿದ್ಯುತ್ ಬಳಕೆದಾರರು ಶ್ರಮದಾನದ ಮೂಲಕ ಮಾಡಿದರು.

ಪವರ್‌ಮ್ಯಾನ್‌ಗಳಾದ ವಿಶ್ವನಾಥ ರಾಮಕುಂಜ, ಭವಿತ್ ಖಂಡಿಗ ಅವರ ಮಾರ್ಗದರ್ಶನದಲ್ಲಿ ತೆರವು ಕಾರ್ಯ ನಡೆಯಿತು. ಚೆನ್ನಪ್ಪ ಗೌಡ ಪಾನ್ಯಾಲು, ಚಿದಾನಂದ ಪಾನ್ಯಾಲು, ಹೊನ್ನಪ್ಪ ಸೀಗೆತ್ತಡಿ, ಶೀನಪ್ಪ ಸೀಗೆತ್ತಡಿ, ಭಾಸ್ಕರ ಕಡೆಂಬ್ಯಾಲು, ಜಯಪ್ರಕಾಶ್ ಕಡೆಂಬ್ಯಾಲು, ಕೃಷ್ಣಪ್ಪ ತಿಮರೆಗುಡ್ಡೆ, ಪ್ರವೀಣ್‌ರಾಜ್ ಕೊಲ್ಯ, ತಿಮ್ಮಪ್ಪ ಓಕೆ, ದಯಾನಂದ ಓಕೆ, ಲಿಂಗಪ್ಪ ಓಕೆ, ರಾಧಾಕೃಷ್ಣ ಟಿ, ಗೌತಮ್ ಪಾನ್ಯಾಲು, ಪೆರ್ನು ಗೌಡ ಕಡೆಂಬ್ಯಾಲು, ದೇವರಾಜು ಕಡೆಂಬ್ಯಾಲು, ತಿಮ್ಮಪ್ಪ ತಿಮರೆಗುಡ್ಡೆ, ಸೀತಾರಾಮ ಕೊಲ್ಯ, ಸತೀಶ ಕೊಲ್ಯ, ಶೇಖರ ಗೌಡ ಪಾಪುತಮಂಡೆ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here