ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಪರಿಸರಕ್ಕೆ ಕಾಲಿಟ್ಟ ಒಂಟಿ ಸಲಗ ಇಲ್ಲೇ ಸಮೀಪದಲ್ಲಿ ಇರುವ ಎರಬೈಲು ಗುಡ್ಡದಲ್ಲಿ ಮಲಗಿದೆ. ಓಲೆಮುಂಡೋವು, ಎರಬೈಲು ಕಾಡು ಪ್ರದೇಶದಲ್ಲಿ ಓಡಾಡಿದ ಆನೆ ಸದ್ಯ ಕಾಡಲ್ಲಿ ವಿಶ್ರಾಂತಿಗೆ ಜಾರಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
![](https://puttur.suddinews.com/wp-content/uploads/2024/06/90002ca6-2dd0-4ba2-85e9-bffb042461c3.jpg)
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿ ಆನೆಯ ಇರುವಿಕೆಯನ್ನು ಖಚಿತ ಪಡಿಸಿಕೊಂಡು ಸ್ಥಳಕ್ಕೆ ಸಾರ್ವಜನಿಕರು ಬರದಂತೆ ಬಂದೋಬಸ್ತ್ ಏರ್ಪಡಿಸಿದ್ದಾರೆ. ಸ್ಥಳಕ್ಕೆ ನೂರಾರು ಮಂದಿ ಜಮಾಯಿಸಿದ್ದಾರೆ