ಬೆಳಂದೂರು ಶಾಲೆಯಲ್ಲಿ ವನಮಹೋತ್ಸವ

0

ಕಾಣಿಯೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾಮಾಜಿಕ ಅರಣ್ಯ ವಿಭಾಗ ಮಂಗಳೂರು,ಸಾಮಾಜಿಕ ಅರಣ್ಯ ವಲಯ ಪುತ್ತೂರು ಮತ್ತು ಯುವಶಕ್ತಿ ಫ್ರೆಂಡ್ಸ್ ಕೆಲಂಬೀರಿ ಇದರ ವತಿಯಿಂದ ಬೆಳಂದೂರು ಪ್ರಾಥಮಿಕ ಶಾಲಾ ಪರಿಸರದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು.

ಪುತ್ತೂರು ವಲಯ ಅರಣ್ಯ ಅಧಿಕಾರಿಯಾಗಿರುವ ವಿಧ್ಯಾರಾಣಿ ಪಿ. ಕೆ ಮತ್ತು ಉಪ ವಲಯ ಅರಣ್ಯ ಅಧಿಕಾರಿ ಯಶೋಧರ ಅವರು ಪರಿಸರ ದಿನಾಚರಣೆಯ ಮಹತ್ವ ಮತ್ತು ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ತಾಂತ್ರಿಕ ಸಹಾಯಕರಾದ ವರ್ಷಾ ಕಯ್ಯ ಶಾಲಾ ಮುಖ್ಯಶಿಕ್ಷಕಿ ಜಾನಕಿ ತುಂಬ್ಯ ,ಸಹ ಶಿಕ್ಷಕರು,ಕೆಲಂಬೀರಿ ಬ್ರಹ್ಮಬೈದೇರುಗಳ ಗರಡಿಯ ಆಡಳಿತ ಸಮಿತಿ ಅಧ್ಯಕ್ಷರಾದ ಬಿ. ಎ ವಸಂತ ಪೂಜಾರಿ ಕೆಲಂಬೀರಿ, ನವೀನ್ ಕೊಯಕ್ಕುಡೆ ಹಾಗೂ ಯುವಶಕ್ತಿ ಫ್ರೆಂಡ್ಸ್‌ ಕೆಲಂಬೀರಿ ಇದರ ಕಾರ್ಯದರ್ಶಿ ಅಕ್ಷಯ್, ಜೊತೆ ಕಾರ್ಯದರ್ಶಿ ಕಿರಣ್ ಮತ್ತು ಸದಸ್ಯರುಗಳು ಮತ್ತು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here