ಗೋಳಿತ್ತೊಟ್ಟು: ಗಾಳಿ ಮಳೆಗೆ ಹಾನಿ- ಪೆರ್ನಾರ್‌ನಲ್ಲಿ ವಿದ್ಯುತ್ ಕಂಬ ಕಟ್

0

ನೆಲ್ಯಾಡಿ: ಜೂ.9ರಂದು ಬೆಳಿಗ್ಗೆ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಗೋಳಿತ್ತೊಟ್ಟು ಗ್ರಾಮದ ವಿವಿಧ ಕಡೆಗಳಲ್ಲಿ ಮರ, ಅಡಿಕೆಮರ, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿವೆ.
ಗೋಳಿತ್ತೊಟ್ಟು ಗ್ರಾಮದ ಕೊಂಕೋಡಿ ಎಂಬಲ್ಲಿ ವಿದ್ಯುತ್ ತಂತಿಯ ಮೇಲೆ ಮರವೊಂದು ಮುರಿದು ಬಿದ್ದಿದೆ.

ಎಸ್‌ಕೆಎಸ್‌ಎಸ್‌ಎಫ್ ಕಾರ್ಯಕರ್ತರಾದ ಅನ್ಸಿಫ್, ಸಾನಿಫ್, ಎಂ.ಕೆ.ಆಶ್ರಫ್, ಹನೀಫ್ ಮರ್ಲಾಪು, ಯುಸೂಫ್ ಯಾನೆ ಪುತ್ತುಕುಂಞಿ ಅವರು ಮರ ತೆರವುಗೊಳಿಸಿದರು. ಪೆರ್ನಾರು ಎಂಬಲ್ಲಿ ವಿದ್ಯುತ್ ಕಂಬವೊಂದು ತುಂಡಾಗಿದ್ದು ಪಂಪ್‌ಶೆಡ್‌ಗೆ ಹಾನಿಯಾಗಿದೆ. ಅನಿಲ ಭಾಗದಲ್ಲಿ ಅಡಿಕೆ ಮರ, ಮರಗಳು ತುಂಡಾಗಿ ಬಿದ್ದಿರುವ ಬಗ್ಗೆ ವರದಿಯಾಗಿದೆ.

LEAVE A REPLY

Please enter your comment!
Please enter your name here