ಈಶ್ವರಮಂಗಳ:ತ್ವೀಬುಲ್ ಹಿಮ್ಮ ಸ್ಟುಡೆಂಟ್ ಯೂನಿಯನ್ ದುಲ್ ಹಜ್ ತಿಂಗಳ ಮಹತ್ವದ ಕುರಿತು ಕಾರ್ಯಕ್ರಮ

0

ಮನ ಪರಿವರ್ತನೆಯಾಗದೆ ಬದಲಾವಣೆ ಅಸಾಧ್ಯ:ತ್ವೀಬುಲ್ ಹಿಮ್ಮ

ಈಶ್ವರಮಂಗಳ: ತ್ವೈಬ ಎಜುಕೇಶನ್ ಸೆಂಟರ್ ಇದರ ವಿದ್ಯಾರ್ಥಿ ಸಂಘಟನೆಯಾದ ತ್ವೀಬುಲ್ ಹಿಮ್ಮ ಸ್ಟುಡೆಂಟ್ ಯೂನಿಯನ್ ದುಲ್ ಹಜ್ ತಿಂಗಳ ಮಹತ್ವದ ಕುರಿತು ತರಗತಿಗಳನ್ನು ನಡೆಸಲಾಯಿತು.

ತ್ವೈಬಾ ಎಜುಕೇಶನ್ ಸೆಂಟರಿನ ಉಸ್ತಾದರಾದ ಹಾಫಿಜ್ ಸ್ವಾದಿಕ್ ಹಿಮಮಿ ಅಧ್ಯಕ್ಷತೆಯನ್ನು ವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಉಪನ್ಯಾಸಕ ಹಾಫಿಜ್ ದಾವೂದ್ ಹಿಮಮಿ ಸಖಾಫಿ ಉದ್ಘಾಟಿಸಿದರು. SYS ದಕ್ಷಿಣ ಕನ್ನಡ ಈಸ್ಟ್ ಜಿಲ್ಲೆಯ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಮಿಸ್ಬಾಹಿ ಈಶ್ವರಮಂಗಳ ಅವರು ವಿಷಯ ಮಂಡಿಸಿದರು. ಪರಿಸರ ದಿನದ ಭಾಗವಾಗಿ ನಡೆಸಲಾಗಿದ್ದ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಘೋಷಿಸಿ ಅವರಿಗೆ ಪುರಸ್ಕಾರಗಳನ್ನು ನೀಡಿ ಸನ್ಮಾನಿಸಲಾಯಿತು.

ಸಂಸ್ಥೆಯ ಮುದರ್ರಿಸುಗಳಾದ ಹಾಫಿಜ್ ಇಂತ್ತಿಯಾಸ್ ಹಿಮಮಿ ಸಖಾಫಿ, ರಂಶಾದ್ ಹಿಮಮಿ ಸಖಾಫಿ, ರಶೀದ್ ಹಿಮಮಿ ಸಖಾಫಿ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಮುಹಲ್ಲಾ ನಿವಾಸಿಗಳು ಉಪಸ್ಥಿತರಿದ್ದರು. ತ್ವೀಬುಲ್ ಹಿಮ್ಮ ಇದರ ಕಾರ್ಯದರ್ಶಿಗಳಾದ ಹಾಫಿಜ್ ಯೂನುಸ್ ರವರು ಸ್ವಾಗತಿಸಿ ,ಹಾಫಿಜ್ ಶಂಸೀರ್ ವಂದಿಸಿದರು.

LEAVE A REPLY

Please enter your comment!
Please enter your name here