ಪುತ್ತೂರು ಶ್ರೀ ಶಾಂತಿನಾಥ ಬಸದಿಗೆ ಮೂಡಬಿದಿರೆಯ ಸ್ವಸ್ತಿಶ್ರೀ ಚಾರು ಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮೀಜಿ ಭೇಟಿ

0

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಶ್ರೀ ಶಾಂತಿನಾಥ ಬಸದಿಗೆ ಜೂ.11ರಂದು ಬಾರಿಕೆ ಪಿ ಗುಣವತಿ ಆರಿಗರವರು ತೀರಿಕೊಂಡ ಪ್ರಯುಕ್ತ 216 ಕಲಶ ಮಹಾಭಿಷೇಕವು ಶಾಂತಿನಾಥ ಸ್ವಾಮಿಗೆ ಮತ್ತು ಪದ್ಮಾವತಿಯಮ್ಮನವರ ಪೂಜೆ ಜರಗಿತು. ಈ ಸಂದರ್ಭದಲ್ಲಿ ಮೂಡುಬಿದಿರೆಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಮಹಾಸ್ವಾಮೀಜಿಯವರು ಭೇಟಿ ನೀಡಿ ಗುಣವತಿ ಅಮ್ಮನವರ ಸ್ಮರಣಾರ್ಥ ಶಾಸ್ತ್ರದಾನ ಪುಸ್ತಕ ಬಿಡುಗಡೆ ಮತ್ತು ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು ಬಾರಿಕೆ ಗುಣವತಿ ಅಮ್ಮನವರಿಗೆ ನುಡಿ ನಮನಗಳನ್ನು ಸಲ್ಲಿಸಿದರು. ಗುಣವತಿಯಮ್ಮನವರ ಮಕ್ಕಳಾದ ನ್ಯಾಯವಾದಿ ಅಶೋಕ್ ಆರಿಗ ಮತ್ತು ಕುಟುಂಬಸ್ಥರು ಪೂಜಾ ಕಾರ್ಯಕ್ರಮವನ್ನು ನಡೆಸಿದರು.

LEAVE A REPLY

Please enter your comment!
Please enter your name here