![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಲ್ಯಾಡಿ: ಕೋಲ್ಪೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
![](https://puttur.suddinews.com/wp-content/uploads/2024/06/kolpe.jpg)
ಮಸೀದಿಯ ಉಸ್ತಾದರಾದ ಇಸ್ಹಾಕ್ ಫೈಝಿ ಕುಕ್ಕಿಲ ಮಾತನಾಡಿ, ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವು ಎಲ್ಲರ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಕರುಣಿಸಲಿ. ಯುವಕರು ಧರ್ಮದಡಿಯಲ್ಲಿ ಕಾರ್ಯನಿರ್ವಹಿಸುತ್ತ ಬಡವರು, ದೀನದಲಿತರ ಜೊತೆ ಉತ್ತಮವಾದ ಸಂಬಂಧ ಬೆಳೆಸಿ ಮಾದರಿ ಯುವ ಪಡೆಯನ್ನು ಕಟ್ಟಿಬೆಳೆಸುವಲ್ಲಿ ಸಹಕರಿಸಬೇಕೆಂದು ಹೇಳಿದರು. ಮಸೀದಿ ಅಧ್ಯಕ್ಷರಾದ ಕೆ.ಕೆ.ಅಬೂಬಕ್ಕರ್ ಅವರು ಈದ್ ಸಂದೇಶ ನೀಡಿದರು. ಗೋಳಿತೊಟ್ಟು ಮಸೀದಿ ಅಧ್ಯಕ್ಷರಾದ ಆರಿಫ್ ಎಚ್. ಹಾಗೂ ಸರ್ವ ಜಮಾಅತರು ಉಪಸ್ಥಿತರಿದ್ದರು. ಕೆ.ಕೆ.ಇಸ್ಮಾಯಿಲ್ ವಂದಿಸಿದರು.