ನರೇಂದ್ರ ಪ.ಪೂ.ಕಾಲೇಜಿನ ಮಂತ್ರಿ ಮಂಡಲ ರಚನೆ

0

ಪುತ್ತೂರು: 2024-25 ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಜೂ.19ರಂದು ಚುನಾವಣೆಯ ಮೂಲಕ ನಡೆಯಿತು.ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ದ್ವಿತೀಯ ವಾಣಿಜ್ಯ ವಿಭಾಗದ ಶ್ರಜನ್ ಕೆ.ಪಿ. , ಕಾರ‍್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಆಶಿಕಾ ರಾವ್, ಜೊತೆ ಕಾರ‍್ಯದರ್ಶಿಯಾಗಿ ಪ್ರಥಮ ವಾಣಿಜ್ಯ ವಿಭಾಗದ ಹರ್ಷಿತಾ ಚುನಾಯಿತರಾದರು. ಕ್ರೀಡಾ ಸಂಘದ ಅಧ್ಯಕ್ಷರಾಗಿ ದ್ವಿತೀಯ ವಾಣಿಜ್ಯ ವಿಭಾಗದ ನಿಶಾಂತ್ ಬಿ.ಆರ್. ,ಕಾರ‍್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಸಿಂಚನಾ ಬಿ. ಆಯ್ಕೆಯಾದರು.


ಈ ಪ್ರಕ್ರಿಯೆಯನ್ನು ನರೇಂದ್ರ ಪ.ಪೂ.ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಕ್ಷೇಮಪಾಲಕ ಉಪನ್ಯಾಸಕರಾದ ಕಾರ್ತಿಕ್ ಕುಮಾರ್‌ಎನ್., ಶಶಿಕಲಾ, ಮಧುರಾ,ಶ್ರೀಮತಿ ಸೌಮ್ಯ, ಇವರು ನಡೆಸಿಕೊಟ್ಟರು.ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

LEAVE A REPLY

Please enter your comment!
Please enter your name here