ಅಪಘಾತದಲ್ಲಿ ಗಾಯಗೊಂಡಿದ್ದ ಸತೀಶ್ ಕನ್ನಡ್ಕ ಅವರಿಗೆ ಹಿಂಜಾವೇಯಿಂದ ಆರ್ಥಿಕ ನೆರವು

0

ಬಡಗನ್ನೂರು: ಸುಳ್ಯಪದವು, ಕನ್ನಡ್ಕ ನಿವಾಸಿ ಸತೀಶ್ ಇವರು ಪೈಂಟಿಂಗ್ ಕೆಲಸ ಮಾಡುತ್ತಿದ್ದು 2 ತಿಂಗಳ ಹಿಂದೆ ಬೈಕ್ ಸ್ಕಿಡ್ ಆಗಿ ಎಡ ಕಾಲಿನ ಮೊಣಕಾಲು ಭಾಗದ ಎಲುಬಿಗೆ ತೀವ್ರ  ಗಾಯಗೊಂಡು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಸರ್ಜರಿಯಾಗಿ, ಪ್ರಸ್ತುತ ನಡೆಯಲಾಗದ ಸ್ಥಿತಿಯಲ್ಲಿ ಮನೆಯಲ್ಲಿದ್ದ ಅವರ ಮನೆಗೆ ತೆರಳಿದ ಹಿಂದು ಜಾಗರಣ ವೇದಿಕೆ ಸುಳ್ಯಪದವು ಘಟಕದ ಕಾರ್ಯಕರ್ತರು ಯೋಗ, ಕ್ಷೇಮ ವಿಚಾರಿಸಿ ಧೈರ್ಯ ತುಂಬಿ 5,000 ರೂ. ಸಹಾಯಧನ ನೀಡಿದ್ದಾರೆ.

ಈ ಸಂಧರ್ಭದಲ್ಲಿ ಹಿಂದು ಜಾಗರಣ ವೇದಿಕೆ ಗೌರವಾಧ್ಯಕ್ಷರಾದ ಗೋಪಾಲ ನಾಯಕ್ ಇಂದಾಜೆ, ಸುಳ್ಯಪದವು, ಅಧ್ಯಕ್ಷ ಅಶೋಕ್ ಪಿ. ಎಸ್, ಪ್ರ. ಕಾರ್ಯದರ್ಶಿ ಸುಧೀರ್ ಶಬರಿನಗರ, ಬಡಗನ್ನೂರು ಗ್ರಾ.ಪಂ.ಸದಸ್ಯ ವೆಂಕಟೇಶ್ ಕನ್ನಡ್ಕ, ಜಾಗರಣ ವೇದಿಕೆಯ ಕೋಶಾಧಿಕಾರಿ ಚೇತನ್ ಕುಲಾಲ್, ಕಾರ್ಯದರ್ಶಿ ರಜತ್ ಬೀರಮೂಲೆ, ಅಚ್ಚುತ ಕನ್ನಡ್ಕ, ಆನಂದ ಪೂಜಾರಿ ಕನ್ನಡ್ಕ, ಚಂದ್ರಶೇಖರ ಬಂಡಾರಿ, ರಂಜಿತ್ ಮರದಮೂಲೆ, ಪ್ರವೀಣ್ ಮರದಮೂಲೆ, ಉದಯ ಶಬರಿನಗರ, ರಮೇಶ್ ಶಬರಿನಗರ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here