ತಿಂಗಳಾಡಿ: ಹಿರಿಯ ಕಾಂಗ್ರೆಸ್ ಮುಖಂಡ ಪಿದಪಟ್ಲ ಬಾಳಪ್ಪ ಪೂಜಾರಿ ನಿಧನ

0

ಪುತ್ತೂರು: ಹಿರಿಯ ಕಾಂಗ್ರೆಸ್ ಮುಖಂಡ, ಕೆದಂಬಾಡಿ ಗ್ರಾಪಂನ ಮಾಜಿ ಉಪಾಧ್ಯಕ್ಷ ಕೆದಂಬಾಡಿ ಗ್ರಾಮದ ಪಿದಪಟ್ಲ ನಿವಾಸಿ ಬಾಳಪ್ಪ ಪೂಜಾರಿ (78ವ)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಜೂ.25ರಂದು ಮಂಗಳೂರಿನಲ್ಲಿ ನಿಧನರಾದರು. ಇವರು 1978ರಲ್ಲಿ ಕೆದಂಬಾಡಿ ಗ್ರಾಪಂನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೆ ಕುಂಬ್ರ ಮೂರ್ತೆದಾರರ ಸೊಸೈಟಿಯಲ್ಲಿ ಸದಸ್ಯರಾಗಿ ಹೀಗೆ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಸಾಕ್ಷಾರತಾ ಆಂದೋಲನದ ಸಮಯದಲ್ಲಿ ಸಾಕ್ಷಾರತಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ತಿಂಗಳಾಡಿಯಲ್ಲಿ ಶೇಂದಿ ಅಂಗಡಿ ಹೊಂದಿದ್ದ ಇವರು ಓರ್ವ ಪ್ರಗತಿಪರ ಕೃಷಿಕರಾಗಿದ್ದರು.

ಮೃತರು ಪತ್ನಿ ಯೋಗಿನಿ, ಪುತ್ರ ಸುರೇಶ್, ಪುತ್ರಿ ಸುರೇಖಾ, ಸಹೋದರಿಯರಾದ ಬೇಬಿ ಜೆ.ಪೂಜಾರಿ, ಜಯಂತಿ ಅಲ್ಲದೆ ಸೊಸೆ, ಅಳಿಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರದಲ್ಲಿ ಹಲವು ಮಂದಿ ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು.

LEAVE A REPLY

Please enter your comment!
Please enter your name here