ಕೊಕ್ಕಡ: ಕಾರು, ಬೈಕ್ ಡಿಕ್ಕಿ-ಬೈಕ್ ಸವಾರರಿಗೆ ಗಾಯ

0

ನೆಲ್ಯಾಡಿ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಾಯಗೊಂಡಿರುವ ಘಟನೆ ಕೊಕ್ಕಡ-ಸೌತಡ್ಕ ರಸ್ತೆಯ ಕೌಕ್ರಾಡಿ ಗ್ರಾಮದ ನೆಕ್ಕರ್ಲ ಎಂಬಲ್ಲಿ ಜೂ.25ರಂದು ಬೆಳಿಗ್ಗೆ ನಡೆದಿದೆ.


ಬೈಕ್ ಸಹ ಸವಾರ ಸುಬ್ರಹ್ಮಣ್ಯ ನಿವಾಸಿ ಹರ್ಷಿತ್ ಹಾಗೂ ಅವರ ಗೆಳೆಯ ಹರಿಶ್ಚಂದ್ರ ಗಾಯಗೊಂಡವರಾಗಿದ್ದಾರೆ. ಇವರು ದ್ವಿಚಕ್ರ ವಾಹನ(ಕೆಎ21, ಇಎ-9598)ದಲ್ಲಿ ಕೊಕ್ಕಡ-ಸೌತಡ್ಕ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಹೋಗುತ್ತಿದ್ದು ಕೌಕ್ರಾಡಿ ಗ್ರಾಮದ ನೆಕ್ಕರ್ಲ ಎಂಬಲ್ಲಿಗೆ ತಲುಪಿದಾಗ ಸೌತಡ್ಕ ದೇವಸ್ಥಾನದ ಕಡೆಯಿಂದ ಸೌತಡ್ಕ ಮುಖ್ಯದ್ವಾರದ ಕಡೆಗೆ ಭರತ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು(ಕೆಎ03, ಎನ್‌ಹೆಚ್ 3219) ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಹರಿಶ್ಚಂದ್ರ ಹಾಗೂ ಸಹ ಸವಾರ ಹರ್ಷಿತ್ ಅವರು ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ಹರ್ಷಿತ್ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿದ್ದು ಸವಾರ ಹರಿಶ್ಚಂದ್ರರವರು ಹೊರ ಹೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಹರ್ಷಿತ್ ಅವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here