ಜೂ.30: ಕೆಎಸ್‌ಆರ್‌ಟಿಸಿ ಚಾಲಕ ಅಪ್ಪು ನಾಯ್ಕ ಎಂ.ಆಟೋಳಿ ಕೊಳ್ತಿಗೆ ಅವರಿಗೆ ಸೇವಾ ನಿವೃತ್ತಿ

0

ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ ಕೊಳ್ತಿಗೆ ಗ್ರಾಮದ ಆಟೋಳಿ ನಿವಾಸಿ ಅಪ್ಪು ನಾಯ್ಕ ಎಂ.ರವರು ಜೂ.30 ರಂದು ಕರ್ತವ್ಯದಿಂದ ನಿವೃತ್ತಿಯಾಗುತ್ತಿದ್ದಾರೆ. 1944ರಿಂದ 2024 ರವರೇಗೆ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು 15 ವರ್ಷಗಳ ಕಾಲ ಮಡಿಕೇರಿ ವಿಭಾಗದಲ್ಲಿ ಹಾಗೂ 2008ರಿಂದ ಪುತ್ತೂರು ಕ.ರಾ.ರ.ಸಾ.ಘಟಕದಲ್ಲಿ ಕರ್ತವ್ಯ ನಿರ್ವಹಸಿದ್ದರು. ಅಪಘಾತ ಮತ್ತು ಅಪರಾಧ ರಹಿತ ಚಾಲನೆಗಾಗಿ ಇವರು 2017ರಲ್ಲಿ ಬೆಳ್ಳಿ ಪದಕಕ್ಕೆ ಪುರಸ್ಕೃತರಾಗಿದ್ದಾರೆ. ಪ್ರಸ್ತುತ ಪತ್ನಿ ಭವಾನಿಶಂಕರಿ, ಪುತ್ರಿ ಜಯಲಕ್ಷ್ಮೀ ಹಾಗೂ ಪುತ್ರ ಮನೋಜ್‌ ಕುಮಾರ್‌ ಅವರೊಂದಿಗೆ ಆಟೋಳಿಯಲ್ಲಿ ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here