ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ರಂಗಶಾಮಯ್ಯ ಅವರಿಗೆ ಬೀಳ್ಕೊಡುಗೆ

0

ನಿಡ್ಪಳ್ಳಿ: ಚಿಕ್ಕಬಳ್ಳಾಪುರ ಜಿಲ್ಲೆಯ ಬೇತಮಂಗಲ ಘಟಕದಿಂದ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ 2024ರ ಲೋಕಸಭಾ ಚುನಾವಣಾ ಕರ್ತವ್ಯ ನಿರ್ವಹಿಸಲು ವರ್ಗಾವಣೆ ಗೊಂಡು ಪೊಲೀಸ್ ನಿರೀಕ್ಷಕರಾಗಿ ಆಗಮಿಸಿದ್ದ ರಂಗ ಶಾಮಯ್ಯ ವೈ ಆರ್.ರವರಿಗೆ ಮತ್ತೆ ಅದೇ ಘಟಕಕ್ಕೆ ವರ್ಗಾವಣೆಗೆ ಆದೇಶವಾದ ಕಾರಣ ಅವರಿಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ  ಜೂ.29ರಂದು ಪೊಲೀಸ್ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ರವರ ಅಧ್ಯಕ್ಷತೆಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು.

ದಕ್ಷ ಮತ್ತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿ ವರ್ಗಾವಣೆ ಗೊಳ್ಳುತ್ತಿರುವ ಪೊಲೀಸ್ ನಿರೀಕ್ಷಕರ ಬಗ್ಗೆ ಸಿಬ್ಬಂದಿಗಳಾದ ಗಿರೀಶ್, ಭೀಮನಗೌಡ ಬಿರಾದರ್, ಗಡದಪ್ಪ ಟಿ ಮೆಚ್ಚುಗೆಯ ಮಾತುಗಳನ್ನಾಡಿ ಶುಭ ಹಾರೈಸಿದರು.ಇಲ್ಲಿ ಸಿಬ್ಬಂದಿಗಳು ನೀಡಿದ ಪೂರ್ಣ ಸಹಕಾರಕ್ಕೆ ರಂಗ ಶಾಮಯ್ಯರವರು ಕೃತಜ್ಞತೆ ಸಲ್ಲಿಸಿದರು.         

ಸಿಬ್ಬಂದಿ ಪಿ.ಎಸ್.ವೆಂಕಪ್ಪ ವಂದಿಸಿದರು. ಸಿಬ್ಬಂದಿ ಪ್ರವೀಣ್  ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. 

LEAVE A REPLY

Please enter your comment!
Please enter your name here