ರಾಜ್ಯಮಟ್ಟದ 20 ಕಿ.ಮೀ.ರೇಸ್‌ವಾಕ್ ಸ್ಪರ್ಧೆ | ಉರ್ಲಾಂಡಿಯ ಪ್ರವೀತ್‌ಗೆ ಬೆಳ್ಳಿಪದಕ

0

ಪುತ್ತೂರು: ವಿಟಿಯು ಪ್ರಾದೇಶಿಕ ಕೇಂದ್ರ ಮೈಸೂರು ಇವರು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜೂ. 26ರಿಂದ 29ರ ವರೆಗೆ ಆಯೋಜಿಸಿದ್ದ 25ನೇ ರಾಜ್ಯಮಟ್ಟದ ಅಥ್ಲೆಟಿಕ್‌ನ 20 ಕಿ.ಮೀ. ರೇಸ್‌ವಾಕ್ ಸ್ಪರ್ಧೆಯಲ್ಲಿ ಮಂಗಳೂರು ಅಡ್ಯಾರು ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿ, ಪುತ್ತೂರಿನ ಉರ್ಲಾಂಡಿ ನಿವಾಸಿ ಪ್ರವೀತ್ ಅವರು ಬೆಳ್ಳಿಪದಕ ಪಡೆದಿದ್ದಾರೆ.
ಜೂ.15ರಂದು ಹಾಸನ ಶ್ರವಣಬೆಳಗೋಳದ ಬಾಹುಬಲಿ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ವಿಟಿಯು ಅಂತರ್‌ ಕಾಲೇಜು ರಾಜ್ಯಮಟ್ಟದ ಚಾಂಪಿಯನ್‌ಶಿಪ್‌ನ 10 ಕಿ.ಮೀ. ಗುಡ್ಡಗಾಡು ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ, ಮಂಗಳೂರಿನ ಸಹ್ಯಾದ್ರಿ ಕಾಲೇಜ್‌ ತಂಡವು ಚಾಂಪಿಯನ್‌ಶಿಪ್‌ ಟ್ರೋಫಿಯನ್ನು ಪಡೆದುಕೊಂಡಿತ್ತು. ಉರ್ಲಾಂಡಿ ನಿವಾಸಿಯಾಗಿರುವ ಇವರು ದಿ. ರಾಮಕೃಷ್ಣ (ಕಿರಣ್‌ ಟೈಲರ್‌)ರವರ ಮೊಮ್ಮಗ.

LEAVE A REPLY

Please enter your comment!
Please enter your name here