ಇರ್ದೆ: 16ನೇ ವರ್ಷದ ಸಾರ್ವಜನಿಕ  ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯ ಆಮಂತ್ರಣ ಪತ್ರ ಬಿಡುಗಡೆ

0

ನಿಡ್ಪಳ್ಳಿ: ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ, ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಗೋಪಾಲಕ್ಷೇತ್ರ ಇರ್ದೆ ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ- ಸ್ವಸಹಾಯ ಸಂಘಗಳ ಒಕ್ಕೂಟ ಇದರ ಸಹಯೋಗದೊಂದಿಗೆ ಅ.16 ರಂದು ಇರ್ದೆ ದೇವಾಲಯದಲ್ಲಿ ನಡೆಯಲಿರುವ 16 ನೇ ವರ್ಷದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಜು.2 ರಂದು ಇರ್ದೆ ದೇವಾಲಯದಲ್ಲಿ ನಡೆಯಿತು.

ದೇವಾಲಯದ ಅರ್ಚಕ ಅನಂತರಾಮ ಮಡ್ಕುಳ್ಳಾಯ ಬಿಡುಗಡೆ ಗೊಳಿಸಿ ಶುಭ ಹಾರೈಸಿದರು.ಯೋಜನೆಯ ಬೆಟ್ಟಂಪಾಡಿ  ವಲಯ  ಮೇಲ್ವಿಚಾರಕ ಸೋಹನ್ ,ಪೂಜಾ ಸಮಿತಿ ಅಧ್ಯಕ್ಷೆ ಶೇಷಮ್ಮ ಉಪ್ಪಳಿಗೆ ಗೌರವಾಧ್ಯಕ್ಷೆ ಚೈತ್ರ ಗಣೇಶ್,ಗೌರವ ಸಲಹೆಗಾರರಾದ ವಿಜಯಲಕ್ಷ್ಮಿ ಎಸ್.ರೈ ಚೆಲ್ಯಡ್ಕ, ಯೋಜನೆಯ ಬೆಟ್ಟಂಪಾಡಿ ವಲಯಾಧ್ಯಕ್ಷ ಬಾಲಕೃಷ್ಣ ,ಗುಮ್ಮಟೆಗದ್ದೆ  ಒಕ್ಕೂಟದ ಅಧ್ಯಕ್ಷ ಹರೀಶ್ ಗೌಡ, ಅಜಲಡ್ಕ ಒಕ್ಕೂಟದ ಅಧ್ಯಕ್ಷ ಚನಿಯಪ್ಪ ನಾಯ್ಕ, ದೂಮಡ್ಕ ಸೇವಾ ಪ್ರತಿನಿಧಿ ಲೀಲಾವತಿ ಕೆ, ಪೇರಲ್ತಡ್ಕ ಸೇವಾ ಪ್ರತಿನಿಧಿ ಲೀಲಾವತಿ. ಡಿ ಉಪ್ಪಳಿಗೆ ಸೇವಾ ಪ್ರತಿನಿಧಿ ಭಾರತಿ ಉಪ್ಪಳಿಗೆ, ಗುಮ್ಮಟೆಗದ್ದೆ ಒಕ್ಕೂಟ ಜೊತೆ ಕಾರ್ಯದರ್ಶಿ ನವೀನ ಆಚಾರ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here