ಬೆಟ್ಟಂಪಾಡಿ: 12 ನೇ ವರ್ಷದ ಸಾಮೂಹಿಕ ದುರ್ಗಾಪೂಜಾ ಸಮಿತಿ ರಚನೆ

0

ಅಧ್ಯಕ್ಷ : ದೇವಿಪ್ರಸಾದ್ ಇರ್ದೆ ಬೀಡು, ಕಾರ್ಯದರ್ಶಿ : ಉಮೇಶ್ ಬಲ್ಲಾಳ್,ಕೋಶಾಧಿಕಾರಿ : ಮನೋಜ್ ಕುಮಾರ್ ರೈ

ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ದಸರಾ ಸಂದರ್ಭದಲ್ಲಿ ವಿಶ್ವಹಿಂದು ಪರಿಷದ್, ಬಜರಂಗದಳ, ಮಾತೃಮಂಡಳಿ, ದುರ್ಗಾವಾಹಿನಿ, ದುರ್ಗಾ ಪೂಜಾ ಸಮಿತಿ ವತಿಯಿಂದ ನಡೆಯಲಿರುವ 12 ನೇ ವರ್ಷದ ಸಾಮೂಹಿಕ ದುರ್ಗಾ ಪೂಜೆಯ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು.  ಅಧ್ಯಕ್ಷರಾಗಿ ದೇವಿಪ್ರಸಾದ್ ಬೈಲಾಡಿ ಇರ್ದೆ ಬೀಡು, ಕಾರ್ಯದರ್ಶಿಯಾಗಿ ಉಮೇಶ್ ಬಲ್ಲಾಲ್ ಬೀಡು, ಕೋಶಾಧಿಕಾರಿಯಾಗಿ ಮನೋಜ್ ರೈ ಮೂರ್ಕಾಜೆ, ಉಪಾಧ್ಯಕ್ಷರುಗಳಾಗಿ ಸಂತೋಷ್ ಕುಮಾರ್ ಬೇರಿಕೆ, ಅರುಣ್ ಗೌಡ ಬಳ್ಳಿತ್ತಡ್ಡ ಆಯ್ಕೆಯಾದರು.

 ಈ ವೇಳೆ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ದುರ್ಗಾ ಪೂಜಾ ಸಮಿತಿಯ ಸಂಚಾಲಕ ಕರುಣಾಕರ ಶೆಟ್ಟಿ ಕೊಮ್ಮಂಡ, ಸಮಿತಿಯ ನಿಕಟಪೂರ್ವ  ಅಧ್ಯಕ್ಷ ಸುವರ್ಣ ಆರ್.ಬಿ., ಕಾರ್ಯದರ್ಶಿ ಮಹೇಶ್ ಕೆ., ಕೋಶಾಧಿಕಾರಿ ಸನತ್ ಕುಮಾರ್ ರೈ ಸೇರಿದಂತೆ ಕಾರ್ಯಕಾರಿ ಸದಸ್ಯರುಗಳು ಮತ್ತು ಭಕ್ತಾಭಿಮಾನಿಗಳು, ಕಾರ್ಯಕರ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here