ಆರೆಸ್ಸೆಸ್‌ ಹಿರಿಯ ಸ್ವಯಂಸೇವಕ ಶಶಿಧರನ್‌ ಪಿಳ್ಳೈ ನಿಧನ

0

ಉಪ್ಪಿನಂಗಡಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ, ಪ್ರಗತಿ ಪರ ಕೃಷಿಕ, ಇಳಂತಿಲದ ನಿವಾಸಿ ಶಶಿಧರನ್ ಪಿಳ್ಳೈ (63) ಹೃದಯಾಘಾತಕ್ಕೀಡಾಗಿ ಗುರುವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


90 ರ ದಶಕದಲ್ಲಿ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಕಮ್ಯೂನಿಸ್ಟ್ ಹಾಗೂ ಮುಸ್ಲಿಮ್ ಮೂಲಭೂತವಾದಿಗಳ ಪ್ರತಿರೋಧವನ್ನು ಎದುರಿಸಿ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದರು. ಇದರ ಪರಿಣಾಮ ದುಷ್ಕರ್ಮಿಗಳ ದಾಳಿಗೆ ಇವರ ಮನೆ ಸಿಲುಕಿತ್ತು. ಬಳಿಕ ದ. ಕ ಜಿಲ್ಲೆಗೆ ಆಗಮಿಸಿದ ಇವರು, ಕೃಷಿಯತ್ತ ಆಕರ್ಷಿತರಾಗಿ, ಬೆಳ್ತಂಗಡಿ ತಾಲೂಕಿನ ಇಳಂತಿಲದಲ್ಲಿ ಕೃಷಿ ಭೂಮಿಯನ್ನು ಖರೀದಿಸಿ ಪ್ರಗತಿಪರ ಕೃಷಿಕರೆನಿಸಿದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here