ಉಪ್ಪಿನಂಗಡಿ ಯುನಿಯನ್ ಬ್ಯಾಂಕ್ ಪ್ರಬಂಧಕರಾದ ನಾಗರಾಜ್ ಬೀಳ್ಕೋಡುಗೆ – ಸ್ಮಿತೇಶ್ ವಿ.ಎಸ್ ಕರ್ತವ್ಯಕ್ಕೆ ಹಾಜರು

0

ಆಲಂಕಾರು: ಉಪ್ಪಿನಂಗಡಿ ಯುನಿಯನ್ ಬ್ಯಾಂಕ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜ್ ರವರು ವಿರಾಜ್ ಪೇಟೆಗೆ ವರ್ಗಾವಣೆಗೊಂಡಿದ್ದು ಇವರಿಗೆ ಉಪ್ಪಿನಂಗಡಿ ಯುನಿಯನ್ ಬ್ಯಾಂಕ್ ಶಾಖೆಯ ಗ್ರಾಹಕರು ಮತ್ತು ಸಿಬ್ಬಂದಿ ವರ್ಗದವರು ಬೀಳ್ಕೋಡುಗೆ ಕಾರ್ಯಕ್ರಮ ನೇರವೆರಿಸಿದರು.

ನಾಗರಾಜ್ ರವರ ಬಗ್ಗೆ ಉಪ್ಪಿನಂಗಡಿಯ ಅಡಿಕೆ ವ್ಯಾಪರಸ್ಥರಾದ ರಾಮ, ಉಪ್ಪಿನಂಗಡಿ ರಾಜೇಶ್ ಇಲ್ಲೆಕ್ಟೀಕಲ್ಸ್ ನ ಮಾಲಕರಾದ ರಾಜೇಶ್ ಶೆಟ್ಟಿ ಸಂಪ್ಯಾಡಿ, ಜ್ಯೋತಿ ಇಲೆಕ್ಟ್ರಿಕಲ್ ಮಾಲಕರಾದ ಸುಂದರ ಗೌಡ ಕೇಪುಳು, ಪತ್ರಕರ್ತರಾದ ಸದಾಶಿವ ಶೆಟ್ಟಿ ಮಾರಂಗ, ಉಪ್ಪಿನಂಗಡಿ ಗ್ರಾ.ಪಂ ಸದಸ್ಯರಾದ ಅಬ್ದುಲ್ ರಹಮಾನ್, ಶ್ರೀ ದುರ್ಗಾ ಕನ್ ಸ್ಟ್ರಕ್ಷನ್ ಮಾಲಕರಾದ ಆನಂದ ಬಿ.ಕೆ, ಶಾಂಭವಿ ಇಲೆಕ್ಟ್ರಿಕಲ್ ನ ಮಾಲಕರಾದ ಮೋಹನ ಶೆಟ್ಟಿ ಸೇರಿದಂತೆ ಹಲವಾರು ವರ್ಗಾವಣೆ ಗೊಂಡ ಯುನಿಯನ್ ಬ್ಯಾಂಕ್ ಉಪ್ಪಿನಂಗಡಿ ಶಾಖೆಯ ನಾಗರಾಜ್ ರವರ ಸೇವೆಯನ್ನು ಕೊಂಡಾಡಿ ಶುಭ ಹಾರೈಸಿದರು. ನಂತರ ವರ್ಗಾವಣೆಗೊಂಡ ನಾಗರಾಜ್ ರವರು ಕರ್ತವ್ಯದಲ್ಲಿರುವಾಗ ಸಹಕರಿಸಿದ ಎಲ್ಲಾ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು. ಇದೇ ಸಂಧರ್ಭದಲ್ಲಿ ನೂತನವಾಗಿ ಕರ್ತವ್ಯಕ್ಕೆ ಹಾಜರಾದ ಉಪ್ಪಿನಂಗಡಿ ಯುನಿಯನ್ ಬ್ಯಾಂಕ್ ಮ್ಯಾನೇಜರ್ ಸ್ಮಿತೇಶ್ ರವರನ್ನು ಸ್ವಾಗತಿಸಲಾಯಿತು. ಬ್ಯಾಂಕ್ ನ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here