ಬೆಳ್ತಂಗಡಿ: ಪತ್ರಿಕಾ ದಿನಾಚರಣೆಯಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಸುದ್ದಿ ಬಳಗದ ಮಧ್ಯೆ ಶುಭಾಶಯಗಳ ವಿನಿಮಯ

0

ಭ್ರಷ್ಟಾಚಾರದ ವಿರುದ್ಧ ಶಾಸಕ ಹರೀಶ್ ಪೂಂಜ ನಡೆಸುವ ಹೋರಾಟಕ್ಕೆ ಸುದ್ದಿ ಬಳಗದ ಬೆಂಬಲ ಘೋಷಣೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜುಲೈ 6ರಂದು ಬೆಳ್ತಂಗಡಿಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಭಾಭವನದಲ್ಲಿ ನಡೆದ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ ಅವರ ನಡುವೆ ಪತ್ರಿಕಾ ದಿನಾಚರಣೆಯ ಶುಭಾಶಯಗಳ ವಿನಿಮಯ ನಡೆಯಿತು.


ಈ ವೇಳೆ ಭ್ರಷ್ಟಾಚಾರದ ವಿರುದ್ಧ ಶಾಸಕ ಹರೀಶ್ ಪೂಂಜ ಅವರು ನಡೆಸುವ ಹೋರಾಟಕ್ಕೆ ಸುದ್ದಿ ಜನಾಂದೋಲನ ವೇದಿಕೆಯಿಂದ ಸಂಪೂರ್ಣ ಬೆಂಬಲ ಘೋಷಣೆ ಮಾಡಲಾಯಿತು.
ಸುದ್ದಿ ಬಿಡುಗಡೆ ಸಿಇಒ ಸಿಂಚನ ಊರುಬೈಲು, ಸುದ್ದಿ ಬಿಡುಗಡೆ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ, ವ್ಯವಸ್ಥಾಪಕ ಮಂಜುನಾಥ ರೈ, ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ, ಸುದ್ದಿ ಬಳಗದ ಹೆರಾಲ್ಡ್ ಪಿಂಟೋ, ಸಂದೀಪ್ ಶೆಟ್ಟಿ, ಸುವೀರ್ ಜೈನ್, ನಿಶಾಂತ್ ಬಂಗೇರ, ನೈನಾ ಪ್ರಸಾದ್, ಲಕ್ಷ್ಮಣ ಕಾವಟೆ, ವರ್ತಕರ ಸಂಘದ ಅಧ್ಯಕ್ಷರೂ ಪತ್ರಕರ್ತರೂ ಆಗಿರುವ ಪುಷ್ಪರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here