ಬೆಳ್ಳಿಪ್ಪಾಡಿ: ಧರೆಗುರುಳಿದ ಮರ – ವಿದ್ಯುತ್ ಕಂಬಗಳಿಗೆ ಹಾನಿ

0

ಪುತ್ತೂರು: ಇತ್ತೀಚೆಗೆ ಕಾಡಾನೆಗಳೆರಡು ಸಂಚರಿಸಿದ ಬೆಳ್ಳಿಪ್ಪಾಡಿ ಗ್ರಾಮದ ಕಠಾರ ಬಾರ್ತೋಲಿ ಎಂಬಲ್ಲಿ ಮರವೊಂದು ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವ ಘಟನೆ ಜು.8ರಂದು ಬೆಳಿಗ್ಗೆ ನಡೆದ ಬಗ್ಗೆ ವರದಿಯಾಗಿದೆ.ಇದರಿಂದ ಬೆಳ್ಳಿಪ್ಪಾಡಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.
ಇತ್ತೀಚೆಗೆ ಕಾಡಾನೆಗಳೆರಡು ಬಾತೋಲಿ ಪರಿಸರದಲ್ಲಿ ಸಂಚರಿಸಿತ್ತು. ಇದೇ ಸ್ಥಳದಲ್ಲೇ ಮರವೊಂದು ರಸ್ತೆಗೆ ಬಿದ್ದು ಪಕ್ಕದಲ್ಲಿದ್ದ ವಿದ್ಯುತ್ ಕಂಬಗಳು ತುಂಡಾಗಿದೆ. ಪರಿಣಾಮ ಬೆಳ್ಳಿಪ್ಪಾಡಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಸ್ಥಳಕ್ಕೆ ಪವರ್ ಮ್ಯಾನ್ ಆಗಮಿಸಿ ದುರಸ್ಥಿ ಕಾರ್ಯಕ್ಕೆ ಮುಂದಾಗಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here