ರೆಂಜಲಾಡಿ ಮದ್ರಸದಲ್ಲಿ ಮುಅಲ್ಲಿಮ್ ಡೇ ಆಚರಣೆ

0

ಪುತ್ತೂರು: ಬದ್ರಿಯಾ ಜುಮಾ ಮಸೀದಿ ರೆಂಜಲಾಡಿ ಮತ್ತು ಎಸ್.ಕೆ.ಎಸ್.ಬಿ.ವಿ ವತಿಯಿಂದ ಮುಅಲ್ಲಿಮ್ ಡೇ ಆಚರಿಸಲಾಯಿತು. ಜಮಾಅತ್ ಖತೀಬ್ ನಾಸಿರ್ ಫೈಝಿ ಮುಅಲ್ಲಿಮ್ ಡೇ ಅನಿವಾರ್ಯತೆ ಕುರಿತು ವಿವರಿಸಿದರು.


ತಿಂಗಳಾಡಿ ಖತೀಬ್ ಮುಹಮ್ಮದ್ ಅಮಾನಿ ಉದ್ಘಾಟಿಸಿದರು. ಖಬರ್ ಝಿಯಾರತ್ ನೇತೃತ್ವವನ್ನು ಮುಅಲ್ಲಿಮರಾದ ಅಬೂಬಕ್ಕರ್ ಮುಸ್ಲಿಯಾರ್ ವಹಿಸಿದ್ದರು. ಎಸ್.ಕೆ.ಎಸ್.ಬಿ.ವಿ
ವತಿಯಿಂದ ನಡೆದ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಹಳೆ ವಿದ್ಯಾರ್ಥಿಗಳ ವತಿಯಿಂದ ಉಸ್ತಾದರುಗಳಿಗೆ ಗೌರವಾರ್ಪಣೆ ಮಾಡಲಾಯಿತು .


ಸಮಾರಂಭದ ಅಧ್ಯಕ್ಷತೆಯನ್ನು ಇಬ್ರಾಹಿಂ ಕಡ್ಯ ವಹಿಸಿದ್ದರು.ವೇದಿಕೆಯಲ್ಲಿ ಎಸ್ಕೆಎಸ್ಸೆಸ್ಸೆಫ್ ರೆಂಜಲಾಡಿ ಶಾಖೆಯ ಅಧ್ಯಕ್ಷ ಅಝೀಝ್ ರೆಂಜಲಾಡಿ, ಆದರ್ಶ ಸೇವಾ ಸಂಘದ ಅಧ್ಯಕ್ಷ ಇಮ್ರಾನ್ ಮಲ್ನಾಡ್, ಗಲ್ಫ್ ಉದ್ಯಮಿ ಉಮ್ಮರ್ ಸುಲ್ತಾನ್ ರೆಂಜಲಾಡಿ ಉಪಸಿತರಿದ್ದರು. ಜಮಾಅತ್ ಪ್ರಧಾನ ಕಾರ್ಯದರ್ಶಿ ಝೈನುದ್ದೀನ್ ಹಾಜಿ ಜೆ.ಎಸ್ ಸ್ವಾಗತಿಸಿದರು. ಸಭೆಯಲ್ಲಿ ಜಮಾಅತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here