ಮುಕ್ರಂಪಾಡಿ ಬಾಲಕಿಯರ ಸ.ಪ.ಪೂ.ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟನೆ

0

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ 2024-25ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಡಾ. ಸರಸ್ವತಿ ಸಿ ಕೆ. ಆನ್‌ಲೈನ್ ವಿದ್ಯಾರ್ಥಿ ತರಬೇತಿದಾರರು ಮತ್ತು ಕಟೆಂಟ್ ಎಡಿಟರ್ ಪುತ್ತೂರು ಇವರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.

ವಿದ್ಯಾರ್ಥಿ ನಾಯಕತ್ವ ಎನ್ನುವುದು ಎಣ್ಣೆ -ಬತ್ತಿಗಳ ಸಮನ್ವಯತೆ ಮತ್ತು ಸಹಕಾರದಿಂದ ದೀಪ ಬೆಳಗುವಂತೆ, ನಾಯಕರು ಸ್ವ ಪ್ರಯತ್ನ ಹಾಗೂ ಇತರರ ಸಹಕಾರದೊಂದಿಗೆ ಯಶಸ್ಸು ಸಾಧಿಸಲು ಸಾಧ್ಯವಿದೆ. ನಾಯಕರಲ್ಲಿ ಜವಾಬ್ದಾರಿ, ಸಮಗ್ರತೆ, ಕಾರ್ಯ ನಿಷ್ಠೆ ಗುಣಗಳಿರಬೇಕು. ಕಠಿಣ ಪರಿಶ್ರಮ ಸ್ವಾಭಿಮಾನಗಳು ಯಶಸ್ವಿಯ ಸೂತ್ರಗಳು ಎಂದು ಹೇಳಿ ಶುಭ ಹಾರೈಸಿದರು. ಸಭಾಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲೆ ಪ್ರಮೀಳ ಜೆಸ್ಸಿ ಕ್ರಾಸ್ತಾ ವಹಿಸಿದ್ದರು ಮತ್ತು ಪ್ರಮಾಣ ವಚನ ಬೋಧಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಮಲ್ಲಿಕಾ ಜೆ.ರೈ ಮತ್ತು ಸದಸ್ಯರಾದ ಚಂದ್ರಕಾಂತ್ ನಾಯಕ್ ಉಪಸ್ಥಿತರಿದ್ದರು. ಹೃದಯಜ್ಯೋತಿ ಮತ್ತು ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕಿ ಚಿತ್ರಲೇಖ ಕೆ. ಸ್ವಾಗತಿಸಿದರು. ಉಪನ್ಯಾಸಕಿ ಶೋಭಾ ಕೆ. ವಂದಿಸಿದರು. ವಿದ್ಯಾರ್ಥಿನಿ ಮೇಘಶ್ರೀ ಕಾಠ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here