ನೆಟ್ಟಣಿಗೆ ಮುಡ್ನೂರು ಬಿಲ್ಲವ ಸಂಘದ ಗ್ರಾಮ ಸಮಿತಿ ಮಹಾಸಭೆ

0

ಈಶ್ವರಮಂಗಲ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ನೆಟ್ಟಣಿಗೆ ಮುಡ್ನೂರು ಬಡಗನ್ನೂರು ಗ್ರಾಮ ಸಮಿತಿ ಮಹಾಸಭೆಯು ಈಶ್ವರಮಂಗಲ ಗಜಾನನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷ ಸರೋಳಿಮೂಲೆ ನಾರಾಯಣ ಪೂಜಾರಿಯವರು ವಹಿಸಿದ್ದರು. ಬಿಲ್ಲವ ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ನೀಡುವ ಉಚಿತ ಪುಸ್ತಕಗಳನ್ನು ಪುತ್ತೂರು ಬಿಲ್ಲವ ಸಂಘದ ಕೋಶಾಧಿಕಾರಿ ಮಹೇಶ್ಚಂದ್ರ ಸಾಲಿಯಾನ್‌ರವರು ಸುಮಾರು 50 ಮಂದಿ ವಿದ್ಯಾರ್ಥಿಗಳಿಗೆ ವಿತರಿಸಿ, ಸಂಘದ ಸಮಾಜ ಸೇವೆಯನ್ನು ಶ್ಲಾಘಿಸಿದರು. ರೋಹಿಣಿ ಶಿವರಾಂ ಸ್ವಾಗತಿಸಿ, ವಿನುತಾ ಪ್ರಶಾಂತ್ ಬೆಳ್ಳಿಚಡವು ವಂದಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ರತಿ ರಮೇಶ್ ಪೂಜಾರಿ ಮುಂಡ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಜ್ಞಾ ಮುಂಡ್ಯ ಮತ್ತು ವಿವಿಧ ಪದಾಧಿಕಾರಿಗಳು ಕಾರ್ಯಕ್ರಮ ನಿರ್ವಹಣೆಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here