ಪುತ್ತೂರು ಬಸ್ ನಿಲ್ದಾಣದಲ್ಲಿ ಶಿವಲಿಂಗ ಪತ್ತೆ !ಲಿಂಗ ಕೊಂಡೊಯ್ದ ಪೊಲೀಸರು

0

ಪುತ್ತೂರು:ಪುತ್ತೂರು ಕೋಟಿ ಚೆನ್ನಯ ಘಟನೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನದಲ್ಲಿ ಸ್ವರ್ಣಲೇಪಿತ ಮಾದರಿ ಹೋಲುವ ಲಿಂಗವೊಂದು ಇರುವುದು ಜು.13ರಂದು ರಾತ್ರಿ ಬೆಳಕಿಗೆ ಬಂದಿದೆ.

ಸ್ವರ್ಣಲೇಪಿತ ಮಾದರಿಯಂತಿರುವ ಲಿಂಗ ಮತ್ತು ಕಪ್ಪು ಬಣ್ಣದ ಪೀಠ ಹೋಲುವ ಲಿಂಗ ಪ್ರಯಾಣಿಕರ ಆಸನದಲ್ಲಿ ಪತ್ತೆಯಾಗಿದೆ. ಇದನ್ನು ಇಲ್ಲಿ ತಂದಿಟ್ಟವರು ಯಾರು ಎನ್ನುವುದು ನಿಗೂಢವಾಗಿದೆ. ಬಸ್‌ ನಿಲ್ದಾಣದ ಒಳಗಿರುವ ಅಂಗಡಿ ವ್ಯವಹಾರ ನಡೆಸುವವರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಸ್ ನಿಲ್ದಾಣದಲ್ಲಿ ಲಿಂಗ ಪತ್ತೆಯಾಗಿದೆ ಎಂದು ಸುದ್ದಿ ಹರಡಿ, ವಿಶ್ವಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ದಾಮೋದ‌ರ್ ಪಾಟಾಳಿ, ಪುತ್ತಿಲ ಪರಿವಾರದ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ, ಪರಿವಾರದ ಪ್ರಮುಖರಾದ ಉಮೇಶ್ ಕೋಡಿಬೈಲು, ರವಿ ರೈ ಕೆದಂಬಾಡಿ, ಸ್ಥಳೀಯ ಅಂಗಡಿಯ ಸೂರಪ್ಪ ಸೇರಿದಂತೆ ಹಲವರು ಅಲ್ಲಿ ಜಮಾಯಿಸಿದರು. ಇದೇ ಸಂದರ್ಭ ಅಲ್ಲಿಗೆ ಆಗಮಿಸಿದ ಪೊಲೀಸರು ‘ಲಿಂಗ’ವನ್ನು ಸುರಕ್ಷಿತವಾಗಿ ಠಾಣೆಗೆ ಕೊಂಡೊಯ್ದರು.

LEAVE A REPLY

Please enter your comment!
Please enter your name here