ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದಲ್ಲಿ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

0

ನೆಲ್ಯಾಡಿ:ನೆಲ್ಯಾಡಿ ಸೂರ್ಯ ನಗರ ಶ್ರೀರಾಮ ಶಾಲೆಯಲ್ಲಿ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜು.20ರಂದು ನಡೆಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನವನ್ನು ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷರಾದ ಸುಪ್ರೀತಾ ರವಿಚಂದ್ರ ಹೊಸವೊಕ್ಲು ವಹಿಸಿದ್ದರು. ಪೂಜಾಸಮಿತಿ ಕಾರ್ಯದರ್ಶಿ ಪ್ರೀತಾ ,ಶಾಲಾ ಶಿಶುಮಂದಿರದ ಅಧ್ಯಕ್ಷರಾದ ಪುಷ್ಪಲತಾ ಜನಾರ್ಧನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮೂಲಚಂದ್ರ ಪ್ರಸ್ತಾವಿಕವಾಗಿ ಮಾತಾನಾಡಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಸುಬ್ರಾಯ ಪುಣಚ, ರವಿಚಂದ್ರ ಹೊಸವೊಕ್ಲು, ಮಾಧವ ಕುಡ್ತಾಜೆ, ಮಾತೃಮಂಡಳಿಯ ಸದಸ್ಯರು, ಪೋಷಕರು, ಎಲ್ಲಾ ಮಾತಾಜಿ ವೃಂದದವರು ಹಾಜರಿದ್ದರು. ಸುಬ್ರಾಯ ಪುಣಚ ಸ್ವಾಗತಿಸಿ, ಪುಷ್ಪ ಜನಾರ್ದನ ವಂದಿಸಿ, ಯಶಸ್ವಿನಿ ಕಾರ್ಯಕ್ರಮವನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here