ಕೊಳ್ತಿಗೆ: ಅಲಸಂಡೆಮಜಲು ಬಿರುಗಾಳಿ ಮಳೆಗೆ ಕೃಷಿ ನಾಶ – ಅಪಾರ ನಷ್ಟ

0

ಪುತ್ತೂರು: ಕೊಳ್ತಿಗೆ ಗ್ರಾಮದ ಅಲಸಂಡೆಮಜಲು ಎಂಬಲ್ಲಿ ಜು.20ರಂದು ರಾತ್ರಿ ಬೀಸಿದ ಬಿರುಗಾಳಿ ಮಳೆಗೆ ಅಲಸಂಡೆಮಜಲು ಭೋಜಪ್ಪ ಗೌಡ ಮತ್ತು ನೀಲಪ್ಪ ಗೌಡ ಅವರಿಗೆ ಸೇರಿದ ತೋಟದಲ್ಲಿ 120ಕ್ಕಿಂತಲೂ ಅಧಿಕ ಅಡಿಕೆ ಮರ, ಹತ್ತಕ್ಕಿಂತಲ್ಲೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿದೆ. ಮಾತ್ರವಲ್ಲದೇ ಕರಿ ಮೆಣಸು, ಬಾಳೆಕೃಷಿಗೆ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here