ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಪೂರ್ಣ ಸುರಕ್ಷಾ ಚೆಕ್ ವಿತರಣೆ

0

ಪುತ್ತೂರು : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಪ್ಪಳಿಗೆ ಒಕ್ಕೂಟದ ಆದಿಶಕ್ತಿ ಸಂಘಟನೆ ಇದರ ಸದಸ್ಯೆಯಾಗಿದ್ದು, ನಿಧನ ಹೊಂದಿರುವ ತೆಂಕಿಲ ದಯಾನಂದ ಶೆಟ್ಟಿಯವರ ಪತ್ನಿ ದಿ. ಮುಕ್ತ ಶೆಟ್ಟಿಯವರ ಚಿಕಿತ್ಸಾ ವೆಚ್ಚದ ಮೊತ್ತವನ್ನು ಧ.ಗ್ರಾ. ಯೋ. ಸಂಪೂರ್ಣ ಸುರಕ್ಷಾದಿಂದ ವಿತರಿಸಲಾಯಿತು.


ಸುರಕ್ಷಾ ಧಿಂದ ಮಂಜೂರಾದ 80 ಸಾವಿರ ರೂಪಾಯಿ ಮೊತ್ತದ ಚೆಕ್ ನ್ನು ಜು.22 ರಂದು ಅವರ ಪತಿ ದಯಾನಂದ ಶೆಟ್ಟಿ ಇವರಿಗೆ ತೆಂಕಿಲದ ನಿವಾಸದಲ್ಲಿ ಹಸ್ತಾಂತರಿಸಲಾಯಿತು.
ಜನಜಾಗೃತಿ ವೇದಿಕೆ ಇದರ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮತ್ತು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಹೆಗ್ಡೆ ಜತೆಯಾಗಿ ಚೆಕ್ ನ್ನು ಹಸ್ತಾಂತರಿಸಿದರು.
ಈ ವೇಳೆ ಒಕ್ಕೂಟದ ಅಧ್ಯಕ್ಷೆ ಸ್ವರ್ಣ ಲತಾ ಹೆಗ್ಡೆ, ಒಕ್ಕೂಟದ ವಲಯ ಅಧ್ಯಕ್ಷ ಬಾಲಕೃಷ್ಣ, ವಲಯದ ಮೇಲ್ವಿಚಾರಕಿ ಉಷಲತಾ ರೈ, ಸೇವಾ ಪ್ರತಿನಿಧಿ ನಳಿನಾಕ್ಷಿ ,ದಯಾನಂದ ಶೆಟ್ಟಿ ಇವರ ಪುತ್ರ , ಪಡೀಲ್ ವಿಘೇಶ್ವರ ಸ್ಟೀಲ್ ಆ್ಯಂಡ್ ಹಾರ್ಡ್ವೇರ್ ಮಾಲೀಕ ಸುಧೀರ್ ಶೆಟ್ಟಿ ,ಸಹೋದರಿ ಮಮತಾ ಶೆಟ್ಟಿ ಹಾಗೂ ಸೊಸೆ ಶೋಭಾ ಶೆಟ್ಟಿ ಇದ್ದರು.

LEAVE A REPLY

Please enter your comment!
Please enter your name here