ಕೆಟ್ಟುಹೋಗಿ ಸಂಚಾರಕ್ಕೆ ತೊಡಕಾದ ನೆಲ್ಲಿಕಟ್ಟೆ ಶಾಲಾ ರಸ್ತೆ

0

ಪುತ್ತೂರು: ನೆಲ್ಲಿಕಟ್ಟೆ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಆರೋಗ್ಯ ಕೇಂದ್ರಕ್ಕೆ ಹೋಗುವ ರಸ್ತೆ ಹಾಳಾಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಕೋಟಿ ಚೆನ್ನಯ್ಯ ಬಸ್ ನಿಲ್ದಾಣದ ಸಮೀಪದ ಈ ರಸ್ತೆಯು ಮಳೆಗಾಲದಲ್ಲಿ ಮಳೆ ನೀರು ಹರಿದು ಹೊಂಡ ಗುಂಡಿಯಿಂದ ಕೂಡಿದೆ. ಅಲ್ಲದೆ ಕೆಸರುಮಯವೂ ಆಗಿ ಸಂಚಾರಕ್ಕೆ ತೊಡಕುಂಟಾಗಿದೆ.

ಶಾಲಾ ಮಕ್ಕಳಿಗೆ ಹೋಗಲು ಹಾಗೂ ರೋಗಿಗಳನ್ನು ಈ ರಸ್ತೆಯಲ್ಲಿ ಕೊಂಡೊಯ್ಯಲು ಆಗದೆ ದಾರಿ ಬದಿಯಲ್ಲಿ ಬಿಡುವಂತಾಗಿದೆ. ಅದಲ್ಲದೆ ಕೆಲವು ವಾಹನಗಳನ್ನು ದಾರಿಯ ಇಕ್ಕೆಳಗಳಲ್ಲಿ ನಿಲ್ಲಿಸುವುದರಿಂದ ಪಾದಚಾರಿಗಳಿಗೂ ಕೂಡ ಬಹಳ ತೊಂದರೆಯಾತ್ತಿದೆ. ಸಂಬಂಧ ಪಟ್ಟವರು ಮುತುವರ್ಜಿವಹಿಸಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here