ನೃತ್ಯಾಂತರಂಗ 115ರ ಕಾರ್ಯಕ್ರಮದಲ್ಲಿ ಪ್ರಣಮ್ಯ ಪಾಲೆಚ್ಚಾರು ಅವರ ಏಕವ್ಯಕ್ತಿ ನೃತ್ಯ

0

ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸರಣಿ ಕಾರ್ಯಕ್ರಮ ನೃತ್ಯಾಂತರಂಗದ 115ನೇ ಸರಣಿಯಲ್ಲಿ ವಿದ್ವಾನ್ ದೀಪಕ್ ಕುಮಾರ್ ಅವರ ಶಿಷ್ಯೆ ಪ್ರಣಮ್ಯ ಪಾಲೆಚ್ಚಾರು ಇವರಿಂದ ಇವರ ಪ್ರಥಮ ಏಕವ್ಯಕ್ತಿ ಭರತನಾಟ್ಯ ಕಾರ್ಯಕ್ರಮ ದರ್ಬೆ ಶಶಿಶಂಕರ ಸಭಾಂಗಣದಲ್ಲಿ ಜು.21ರಂದು ನಡೆಯಿತು.


ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ವಿ.ಜಿ. ಭಟ್ ರವರು ಅಭ್ಯಾಗತರಾಗಿ ಭಾಗವಹಿಸಿದರು. ಸಂಸ್ಥೆಯ ವಿದ್ಯಾರ್ಥಿಗಳಾದ ಆಪ್ತ ಚಂದ್ರಮತಿ, ನಿಶಿ, ಪ್ರೀತಿ ಪ್ರಭು, ಲಾಸ್ಯ, ಮನಿಹ, ಆದ್ಯ, ಗಿರೀಶ್ ಕುಮಾರ್, ಆದ್ಯ ಭಟ್, ವಿಭಾಶ್ರೀ ಕಾರ್ಯಕ್ರಮದ ನಿರ್ವಹಣೆ ಮಾಡಿದರು. ವಿದುಷಿ ಅಕ್ಷತಾ ವಿಷಯ ಮಂಡನೆ ಮಾಡಿದರು. ಗುರು ವಿದ್ವಾನ್ ದೀಪಕ್ ಕುಮಾರ್ ನೃತ್ಯದ ಬಗ್ಗೆ ವಿವರಣೆ ನೀಡಿದರು.

LEAVE A REPLY

Please enter your comment!
Please enter your name here