ಪಾಂಬಾರು ಆರ್.ಪಿ.ಕಲಾ ಸೇವಾ ಟ್ರಸ್ಟ್‌ನಿಂದ ಕಲಾವಿದ ಸುರೇಶ್ ರಾವ್ ಪುತ್ತೂರುರವರಿಗೆ ಕಲಾ ರತ್ನ ಪ್ರಶಸ್ತಿ

0

ಪುತ್ತೂರು: ಪಾಂಬಾರು ಆರ್.ಪಿ.ಕಲಾ ಸೇವಾ ಟ್ರಸ್ಟ್ ವತಿಯಿಂದ ಕಲಾವಿದ ಸುರೇಶ್ ರಾವ್ ಪುತ್ತೂರುರವರಿಗೆ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪೆರ್ಲಂಪಾಡಿಯಲ್ಲಿ ಜು.21ರಂದು ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪುತ್ತೂರು ನಿವಾಸಿಯಾದ ಸುರೇಶ್ ರಾವ್‌ರವರು ಬ್ಯಾಂಕ್ ಆಫ್ ಬರೋಡದ ಬಿಸಿ.ರೋಡ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಾಟಕ, ಹಾಡು, ನೃತ್ಯ ಇವರ ಹವ್ಯಾಸವಾಗಿದೆ. ಹಾಡುಗಾರಿಕೆಯಲ್ಲಿ 7 ವರ್ಷಗಳ ಅನುಭವ ಹೊಂದಿರುವ ಇವರು ಹಲವಾರು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಇವರ ಕಲಾ ಸೇವೆಯನ್ನು ಗುರುತಿಸಿ ಇವರಿಗೆ ಕಲಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.

LEAVE A REPLY

Please enter your comment!
Please enter your name here