ಸರ್ವೆ ಶ್ರೀ ಗೌರಿ ಮಹಿಳಾ ಮಂಡಲದಿಂದ ಶ್ರೀ ವರಮಹಾಲಕ್ಷ್ಮಿ ಪೂಜೆ- ಆಮಂತ್ರಣ ಬಿಡುಗಡೆ

0

ಪುತ್ತೂರು: ಶ್ರೀ ಗೌರಿ ಮಹಿಳಾ ಮಂಡಲ ಸರ್ವೆ ಇದರ ವತಿಯಿಂದ ನಡೆಯುವಂತಹ ತೃತೀಯ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆಯಾಗಿರುವ ಮೋಹಿನಿ ಭಕ್ತಕೋಡಿಯವರು ಬಿಡುಗಡೆ ಮಾಡಿದರು. ಶ್ರೀರಾಮ ಭಜನಾ ಮಂದಿರ ಭಕ್ತಕೋಡಿ ಇದರ ಅಧ್ಯಕ್ಷರಾದ ರಾಜೇಶ್ ಸರ್ವೆದೋಳಗುತ್ತು, ಶ್ರೀ ಷಣ್ಮುಖ ಯುವಕ ಮಂಡಲದ ಗೌರವ ಸಲಹೆಗಾರರಾದ ಶಶಿಧರ್ ಸರ್ವೆದೋಳಗುತ್ತು, ಸದಸ್ಯರಾದ ಅಶೋಕ್ ಸರ್ವೇದೋಳಗುತ್ತು ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಹಿಳಾ ಮಂಡಲದ ಕಾರ್ಯದರ್ಶಿ ಕುಶಲನಾಗೇಶ್ ಪಟ್ಟೆಮಜಲು , ಉಪಾಧ್ಯಕ್ಷೆ ಭವ್ಯಸುಬ್ರಹ್ಮಣ್ಯ ಕರುಂಬಾರು, ಖಜಾಂಚಿ ರಜನಿ ರಾಜೇಶ್ ಸರ್ವೆದೋಳಗುತ್ತು ಮತ್ತು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here