ಬೆಳಂದೂರು ಬಿಜೆಪಿ ಬೂತ್ 72ರ ಸಮಿತಿ ಸಭೆ-ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ನಿರ್ಮಲ ಕೇಶವ ಗೌಡ ಅಮೈ, ಪ್ರ. ಕಾರ್ಯದರ್ಶಿಯಾಗಿ ಅನಿಲ್ ಕೂಂಕ್ಯ

ಕಾಣಿಯೂರು: ಭಾರತೀಯ ಜನತಾ ಪಾರ್ಟಿ ಬೆಳಂದೂರು ವಾರ್ಡ್ 1ಬೂತ್ 72ರ ಸಭೆಯು ಬೂತ್ ಅಧ್ಯಕ್ಷರಾದ ನಿರ್ಮಲ ಕೇಶವ ಗೌಡರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನೂತನ ಬೂತ್ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸವಣೂರು ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ತಾರಾನಾಥ್ ಕಾಯರ್ಗ ನಡೆಸಿ ಕೊಟ್ಟರು .
ಬೆಳಂದೂರು ಗ್ರಾಮದ ವಾರ್ಡ್ 1ಬೂತ್ ಸಂಖ್ಯೆ 72ರ ರ ಬಿಜೆಪಿ ಬೂತ್ ಸಮಿತಿಯ ಅಧ್ಯಕ್ಷರಾಗಿ ನಿರ್ಮಲ ಕೇಶವ ಗೌಡ ಅಮೈರವರನ್ನು ಪುನರಾಯ್ಕೆ ಮಾಡಲಾಯಿತು., ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಕೂಂಕ್ಯ , ಮತಗಟ್ಟೆ ಏಜೆಂಟ್ ಆನಂದ ಕೂಂಕ್ಯ,ಬಿ.ಎಲ್.ಎ 2 ಗೋಪಾಲ ಸುವರ್ಣ ಕೂಂಕ್ಯ, ಮಹಿಳಾ ಸದಸ್ಯೆ ಸರಸ್ವತಿ .ಪಿ ಎಸ್.ಸಿ ಪ್ರಮುಖ್ ತಿಮ್ಮಪ್ಪ ಬನಾರಿ, ,ಒ.ಬಿ.ಸಿ ಪ್ರಮುಖ್ ಶೋಧನ್ ಕುಮಾರ್, ಸದಸ್ಯರುಗಳಾಗಿ ಚಂದ್ರಶೇಖರ ಆಚಾರ್ಯ ಬನಾರಿ, ವಸಂತ ಗೌಡ ಅಮೈ, ರಾಘವ ಗೌಡ ಪಟ್ಟೆ, ಪ್ರವೀಣ್ ಅಮೈರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಳಂದೂರು ಶಕ್ತಿ ಕೇಂದ್ರದ ಅಧ್ಯಕ್ಷರಾದ ಜಯಂತ ಅಬೀರ ಉಪಸ್ಥಿತರಿದ್ದರು. ನಿರ್ಮಲ ಕೇಶವ ಗೌಡ ಸ್ವಾಗತಿಸಿ , ವಂದಿಸಿದರು.

LEAVE A REPLY

Please enter your comment!
Please enter your name here