ಕಡಬ: ಅರ್ಬಿತೋಡಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ

0

ಕಡಬ: ಇಲ್ಲಿನ ಕುಮಾರಧಾರ ನದಿ ಸಮೀಪದ ಅರ್ಬಿತೋಡಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಕೆರ್ಮಾಯಿಯ ರಮೇಶ ಎಂದು ಗುರುತಿಸಲಾಗಿದೆ.
ಕೆ.ಎಫ್,ಡಿ ಸಿ ಯ ಅರ್ಬಿತೋಡು ಬಳಿ ಹೊಳೆಯಲ್ಲಿ ಬರುವ ತೆಂಗಿನಕಾಯಿ ಸಂಗ್ರಹಿಸಲು ಹೊಳೆಗೆ ಇಳಿದು ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಐತ್ತೂರು ಗ್ರಾ.ಪಂ. ಅಧ್ಯಕ್ಷ ರು ಹಾಗೂ ಪಿಡಿಒ, ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿದ್ದಾರೆ. ಕಡಬ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here