ಬಚ್ಚಲು ಮನೆಗೆ ಇಣುಕಿ ನೋಡಿದ ಪ್ರಕರಣ – ಆರೋಪಿಗೆ ಜಾಮೀನು ಮಂಜೂರು

0

ಪುತ್ತೂರು: ಯುವತಿಯೋರ್ವಳು ತನ್ನ ಮನೆಯ ಬಚ್ಚಲು ಕೋಣೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಬಚ್ಚಲು ಕೋಣೆಯ ಹೊರಭಾಗದ ಕಿಟಕಿಯಿಂದ ಇಣುಕಿ ನೋಡಿದ ಪ್ರಕರಣ ಮತ್ತು ಮನೆಯ ಮುಂಭಾಗದ ಬಾಗಿಲು ಬಡಿದ ಪ್ರಕರಣದ ಆರೋಪಿ ಪೆರಿಯಡ್ಕ ನಿವಾಸಿ ಅಬ್ದುಲ್ ರಹಿಮಾನ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜು.21ರಂದು ಆರೋಪಿ ಅಬ್ದುಲ್ ರಹಿಮಾನ್ ಅವರು ಯುವತಿಯೊರ್ವಳು ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯಿಂದ ನೋಡಿರುವುದಾಗಿ ಮತ್ತು ಯುವತಿ ಮನೆಯ ಮುಂಬಾಗಿಲನ್ನು ಬಡಿದಿರುವ ಆರೋಪಕ್ಕೆ ಸಂಬಂಧಿಸಿ ಆರೋಪಿ ಅಬ್ದುಲ್ ರಹಿಮಾನ್ ಅವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಇದೀಗ ಆರೋಪಿಯನ್ನು ವಿಚಾರಿಸಿದ ನ್ಯಾಯಾಲಯ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲ ಅಬ್ದುಲ್ ರಹಿಮಾನ್ ಹಿರೇಬಂಡಾಡಿ ಅವರು ವಾದಿಸಿದರು.

LEAVE A REPLY

Please enter your comment!
Please enter your name here