ಕೊಳ್ತಿಗೆ ಸ.ಹಿ.ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ, ಪದಾಧಿಕಾರಿಗಳ ಆಯ್ಕೆ

0


ಅಧ್ಯಕ್ಷ: ಜಯತ್ ಕೆಮ್ಮಾರ,ಕಾರ್ಯದರ್ಶಿ: ವಿಜೇಶ್ ರೈ,ಕೋಶಾಧಿಕಾರಿ: ವಿನೋದ್ ರೈ

ಪುತ್ತೂರು :- ದ.ಕ.ಜಿ.ಪಂ‌.ಹಿರಿಯ ಪ್ರಾಥಮಿಕ ಶಾಲೆ ಕೊಳ್ತಿಗೆ ಇಲ್ಲಿನ 2024-25 ನೇ ಸಾಲಿನ ಹಿರಿಯ ವಿದ್ಯಾರ್ಥಿ ಸಂಘದ ನೂತನ ‌ಸಮಿತಿಯ ಆಯ್ಕೆ ಮತ್ತು ವಾರ್ಷಿಕ ಸಭೆಯು ಜು. 28 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
2023-24 ರ ಸಮಿತಿಯ ಪದಾಧಿಕಾರಿಗಳನ್ನೇ ಮುಂದಿನ ಒಂದು ವರ್ಷದವರೆಗೆ ಮುಂದುವರಿಸುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಸದಸ್ಯರು ನಿರ್ಣಯಿಸಿದರು.
ಗೌರವಾಧ್ಯಕ್ಷರಾಗಿ ಕೃಷ್ಣಪ್ಪ ಗೌಡ ಬಾಯಂಬಾಡಿ, ಅಧ್ಯಕ್ಷರಾಗಿ ಜಯತ್ ಕೆಮ್ಮಾರ, ಕಾರ್ಯದರ್ಶಿಯಾಗಿ‌ ವಿಜೇಶ್ ರೈ ಕೆಳಗಿನಮನೆ, ಕೋಶಾಧಿಕಾರಿಯಾಗಿ‌ ವಿನೋದ್ ರೈ ಕೆಳಗಿನಮನೆ ಹಾಗೂ ಉಪಾಧ್ಯಕ್ಷರಾಗಿ ಸಂತೋಷ್ ಬಾಯಂಬಾಡಿ, ಜೊತೆ ಕಾರ್ಯದರ್ಶಿಯಾಗಿ ಅನುಷ್ ರೈ ಕೆಳಗಿನಮನೆ, ಕ್ರೀಡಾ ಕಾರ್ಯದರ್ಶಿಯಾಗಿ ಶೋಭಿತ್ ಕೆಮ್ಮಾರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮಹೇಶ್ ಕುಂಡಡ್ಕ ಮತ್ತು 13 ಸದಸ್ಯರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಈ‌ ಸಂದರ್ಭದಲ್ಲಿ ವಾರ್ಷಿಕ ಲೆಕ್ಕಪತ್ರ ‌ಮಂಡನೆ, ಮುಂದಿನ ಕೆಲಸ ಕಾರ್ಯಗಳ ಬಗ್ಗೆ ಪದಾಧಿಕಾರಿಗಳು ಮತ್ತು ಸದಸ್ಯರು ಸಭೆಯಲ್ಲಿ ನಿರ್ಣಯಿಸಿದರು. ಸಭೆಯಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಘದ ಸದಸ್ಯರಾದ ಶಾಹುಲ್ ನಿರೂಪಿಸಿದರು, ಕಾರ್ಯದರ್ಶಿ ವಿಜೇಶ್ ರೈ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here