ಶ್ರೀ ರಾಮ ಶಾಲೆಯಿಂದ ಆರ್ಥಿಕ ನೆರವು

0

ಉಪ್ಪಿನಂಗಡಿ: ಗುಡ್ಡ ಕುಸಿತಕ್ಕೊಳಗಾಗಿ ಮನೆ ಹಾನಿಗೊಳಗಾದ ಉಪ್ಪಿನಂಗಡಿ ಶ್ರೀ ರಾಮ ಶಾಲೆಯ ಪೋಷಕ ಉಡ್ಲದಕೋಡಿ ನಿವಾಸಿ ವಿಶ್ವನಾಥ ನಾಯ್ಕ ಅವರಿಗೆ ಶ್ರೀ ರಾಮ ಶಾಲೆಯ ಆಡಳಿತ ಮಂಡಳಿಯ ವತಿಯಿಂದ 11 ಸಾವಿರ ರೂಪಾಯಿ ತುರ್ತು ನೆರವನ್ನು ನೀಡಲಾಯಿತು.


ವಿಶ್ವನಾಥ ನಾಯ್ಕರ ಪುತ್ರಿ ಶ್ರೀ ರಾಮ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಗುಡ್ಡ ಕುಸಿದು ಮನೆ ಹಾನಿಗೊಳಗಾಗಿರುವ ವಿಷಯ ತಿಳಿದ ಶ್ರೀ ರಾಮ ಶಾಲಾ ಆಡಳಿತ ಮಂಡಳಿಯ ತಂಡ ತಕ್ಷಣ ಅವರ ಮನೆಗೆ ತೆರಳಿ ಮನೆಯವರಿಗೆ ಧೈರ್ಯ ತುಂಬಿದರಲ್ಲದೆ, ಆರ್ಥಿಕ ನೆರವನ್ನು ನೀಡಿ ಶ್ರೀ ರಾಮ ಶಾಲೆಯು ಸದಾ ನಿಮ್ಮ ಜೊತೆಗಿರುತ್ತದೆ ಎಂದು ಭರವಸೆ ನೀಡಿದರು. ಈ ಸಂದರ್ಭ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಯು.ಜಿ.ರಾಧಾ, ಅಧ್ಯಕ್ಷ ಸುನೀಲ್ ಆನಾವು, ಕೋಶಾಧಿಕಾರಿ ಸುಧೀರ್, ಹಿಂದೂಪರ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, 34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ಪ್ರಶಾಂತ್ ಎನ್., ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here